• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಕೇರಳದಲ್ಲಿ ಹೀಗೊಂದು ಪರಿಸರ ಸ್ನೇಹಿ ಮದುವೆ ಶೈಲಿ…

TNN Correspondent Posted On October 31, 2017
0


0
Shares
  • Share On Facebook
  • Tweet It

ಎಲ್ಲರೂ ಪರಿಸರ ಕಾಪಾಡಬೇಕು, ಅರಣ್ಯ ರಕ್ಷಿಸಬೇಕು, ಜಲಸಂಪತ್ತಿನ ರಕ್ಷಣೆ ಮಾಡಬೇಕು, ನೀರು, ಆಹಾರ ಉಳಿಸಬೇಕು…

ಹೀಗೆ ವೇದಿಕೆ ಸಿಕ್ಕರೆ ಎಲ್ಲರೂ ಮಾರುದ್ದ ಭಾಷಣ ಬಿಗಿಯುತ್ತೇವೆ. ಆದರೆ ನಮ್ಮೆದುರೇ ಪ್ಲಾಸ್ಟಿಕ್ ಬಾಟಲಿಯಲ್ಲಿ ಬಿಸ್ಲೇರಿ ನೀರು ನೋಡು ನಗುತ್ತಿರುತ್ತದೆ. ವೇದಿಕೆ ಇಳಿದ ಮೇಲಂತೂ ನಾವ್ಯಾರೋ, ನಮ್ಮ ಮಾತುಗಳಾವವೋ ಎಂಬಂತೆ ವರ್ತಿಸುತ್ತೇವೆ.

ಆದರೆ ಕೇರಳದ ಕಣ್ಣೂರು ಜಿಲ್ಲೆ ಕೊಲಾದ್ ನಲ್ಲಿ ಹಾಗಲ್ಲ. ಪರಿಸರ ರಕ್ಷಣೆ ಇಲ್ಲಿ ಸಿದ್ಧಾಂತ ಅಲ್ಲ, ಪ್ರಾಯೋಗಿಕ…

ಹೌದು, ಈ ಊರಿನಲ್ಲಿ ಮದುವೆಯಾಗಬೇಕಾದರೆ ಪಂಚಾಯಿತಿಯಲ್ಲಿ ನೋಂದಣಿ ಮಾಡಿಸಿರಬೇಕು. ಮದುವೆಯಲ್ಲಿ ಪ್ಲಾಸ್ಟಿಕ್ ತಟ್ಟೆ, ಲೋಟ ಉಪಯೋಗಿಸುವಂತಿಲ್ಲ ಎಂದು ಪಂಚಾಯಿತಿ ನಿಯಮ ಮಾಡಿದೆ. ಹಾಗೊಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿದರೆ 10 ಸಾವಿರ ರುಪಾಯಿ ದಂಡ ಹಾಕಲಾಗುತ್ತದೆ. ಮದುವೆ ನೋಂದಣಿ ರದ್ದುಗೊಳಿಸಲಾಗುತ್ತದೆ.

ಈ ಪರಿಸರ ಸ್ನೇಹಿ ಕಠಿಣ ನಿಯಮದಿಂದ ಪ್ರಸ್ತುತ ಬಹುತೇಕ ಜನ ಮದುವೆಯಲ್ಲಿ ಪ್ಲಾಸ್ಟಿಕ್ ವಸ್ತು ಬಳಸುತ್ತಿಲ್ಲ. ಪಂಚಾಯಿತಿಯ ಕಟ್ಟುನಿಟ್ಟಿನ ನಿಯಮವನ್ನು ಕಡ್ಡಾಯವಾಗಿ ಪಾಲಿಸುತ್ತಾರೆ. ಕೆಲವೊಬ್ಬರು ಉಪಟಳ ಮಾಡಿದರೆ ದಂಡಕ್ಕೆ ಗುರಿಯಾಗಿಯೂ ಇದ್ದರೆ.

ಪರಿಸರ ರಕ್ಷಣೆ ದೃಷ್ಟಿಯಿಂದ ಪಂಚಾಯಿತಿ ಈ ನಿಯಮ ಜಾರಿಗೆ ತಂದ್ದಿದ್ದು, ಈ ಕುರಿತು ಜಾಗೃತಿ ಸಹ ಮೂಡಿಸಲಾಗಿದೆ. ಈ ಜಾಗೃತಿ ಅಭಿಯಾನದ ರೂಪ ಪಡೆದು ಈಗ 100 ಜನ ಸೇರುವ ಪ್ರತಿ ಕಾರ್ಯಕ್ರಮದಲ್ಲೂ ಪ್ಲಾಸ್ಟಿಕ್ ವಸ್ತು ಬಳಸುವುದಿಲ್ಲ ಎಂಬ ಮತ್ತೊಂದು ನಿಯಮ ಜಾರಿಗೊಳಿಸಲಾಗಿದೆ.

ನಾವು ಸಹ ಮನಸ್ಸು ಮಾಡಿದರೆ, ಪರಿಸರದ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸಿದರೆ ಕೇರಳ ಮಾದರಿ ಅನುಸರಿಸೋಣ.

0
Shares
  • Share On Facebook
  • Tweet It




Trending Now
ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
Tulunadu News April 14, 2026
ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
Tulunadu News April 7, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!

  • Privacy Policy
  • Contact
© Tulunadu Infomedia.

Press enter/return to begin your search