• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕೇರಳದಲ್ಲಿ ಹೀಗೊಂದು ಪರಿಸರ ಸ್ನೇಹಿ ಮದುವೆ ಶೈಲಿ…

TNN Correspondent Posted On October 31, 2017


  • Share On Facebook
  • Tweet It

ಎಲ್ಲರೂ ಪರಿಸರ ಕಾಪಾಡಬೇಕು, ಅರಣ್ಯ ರಕ್ಷಿಸಬೇಕು, ಜಲಸಂಪತ್ತಿನ ರಕ್ಷಣೆ ಮಾಡಬೇಕು, ನೀರು, ಆಹಾರ ಉಳಿಸಬೇಕು…

ಹೀಗೆ ವೇದಿಕೆ ಸಿಕ್ಕರೆ ಎಲ್ಲರೂ ಮಾರುದ್ದ ಭಾಷಣ ಬಿಗಿಯುತ್ತೇವೆ. ಆದರೆ ನಮ್ಮೆದುರೇ ಪ್ಲಾಸ್ಟಿಕ್ ಬಾಟಲಿಯಲ್ಲಿ ಬಿಸ್ಲೇರಿ ನೀರು ನೋಡು ನಗುತ್ತಿರುತ್ತದೆ. ವೇದಿಕೆ ಇಳಿದ ಮೇಲಂತೂ ನಾವ್ಯಾರೋ, ನಮ್ಮ ಮಾತುಗಳಾವವೋ ಎಂಬಂತೆ ವರ್ತಿಸುತ್ತೇವೆ.

ಆದರೆ ಕೇರಳದ ಕಣ್ಣೂರು ಜಿಲ್ಲೆ ಕೊಲಾದ್ ನಲ್ಲಿ ಹಾಗಲ್ಲ. ಪರಿಸರ ರಕ್ಷಣೆ ಇಲ್ಲಿ ಸಿದ್ಧಾಂತ ಅಲ್ಲ, ಪ್ರಾಯೋಗಿಕ…

ಹೌದು, ಈ ಊರಿನಲ್ಲಿ ಮದುವೆಯಾಗಬೇಕಾದರೆ ಪಂಚಾಯಿತಿಯಲ್ಲಿ ನೋಂದಣಿ ಮಾಡಿಸಿರಬೇಕು. ಮದುವೆಯಲ್ಲಿ ಪ್ಲಾಸ್ಟಿಕ್ ತಟ್ಟೆ, ಲೋಟ ಉಪಯೋಗಿಸುವಂತಿಲ್ಲ ಎಂದು ಪಂಚಾಯಿತಿ ನಿಯಮ ಮಾಡಿದೆ. ಹಾಗೊಂದು ವೇಳೆ ಯಾರಾದರೂ ನಿಯಮ ಉಲ್ಲಂಘಿಸಿದರೆ 10 ಸಾವಿರ ರುಪಾಯಿ ದಂಡ ಹಾಕಲಾಗುತ್ತದೆ. ಮದುವೆ ನೋಂದಣಿ ರದ್ದುಗೊಳಿಸಲಾಗುತ್ತದೆ.

ಈ ಪರಿಸರ ಸ್ನೇಹಿ ಕಠಿಣ ನಿಯಮದಿಂದ ಪ್ರಸ್ತುತ ಬಹುತೇಕ ಜನ ಮದುವೆಯಲ್ಲಿ ಪ್ಲಾಸ್ಟಿಕ್ ವಸ್ತು ಬಳಸುತ್ತಿಲ್ಲ. ಪಂಚಾಯಿತಿಯ ಕಟ್ಟುನಿಟ್ಟಿನ ನಿಯಮವನ್ನು ಕಡ್ಡಾಯವಾಗಿ ಪಾಲಿಸುತ್ತಾರೆ. ಕೆಲವೊಬ್ಬರು ಉಪಟಳ ಮಾಡಿದರೆ ದಂಡಕ್ಕೆ ಗುರಿಯಾಗಿಯೂ ಇದ್ದರೆ.

ಪರಿಸರ ರಕ್ಷಣೆ ದೃಷ್ಟಿಯಿಂದ ಪಂಚಾಯಿತಿ ಈ ನಿಯಮ ಜಾರಿಗೆ ತಂದ್ದಿದ್ದು, ಈ ಕುರಿತು ಜಾಗೃತಿ ಸಹ ಮೂಡಿಸಲಾಗಿದೆ. ಈ ಜಾಗೃತಿ ಅಭಿಯಾನದ ರೂಪ ಪಡೆದು ಈಗ 100 ಜನ ಸೇರುವ ಪ್ರತಿ ಕಾರ್ಯಕ್ರಮದಲ್ಲೂ ಪ್ಲಾಸ್ಟಿಕ್ ವಸ್ತು ಬಳಸುವುದಿಲ್ಲ ಎಂಬ ಮತ್ತೊಂದು ನಿಯಮ ಜಾರಿಗೊಳಿಸಲಾಗಿದೆ.

ನಾವು ಸಹ ಮನಸ್ಸು ಮಾಡಿದರೆ, ಪರಿಸರದ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸಿದರೆ ಕೇರಳ ಮಾದರಿ ಅನುಸರಿಸೋಣ.

  • Share On Facebook
  • Tweet It


- Advertisement -


Trending Now
ದೇವರು ಕೊಟ್ಟರೂ ಅರ್ಚಕ ಕೊಟ್ಟಿಲ್ಲ ಎಂದು ಇನ್ನು ಆಗಲಿಕ್ಕಿಲ್ಲ!!
Tulunadu News June 5, 2023
ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
Tulunadu News June 2, 2023
Leave A Reply

  • Recent Posts

    • ದೇವರು ಕೊಟ್ಟರೂ ಅರ್ಚಕ ಕೊಟ್ಟಿಲ್ಲ ಎಂದು ಇನ್ನು ಆಗಲಿಕ್ಕಿಲ್ಲ!!
    • ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
  • Popular Posts

    • 1
      ದೇವರು ಕೊಟ್ಟರೂ ಅರ್ಚಕ ಕೊಟ್ಟಿಲ್ಲ ಎಂದು ಇನ್ನು ಆಗಲಿಕ್ಕಿಲ್ಲ!!
    • 2
      ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • 3
      ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • 4
      ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • 5
      ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search