• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅಪ್ಪನ ಕಳೆದುಕೊಂಡ ಅಪರಿಜಿತಾ ರೈ ಸಿಕ್ಕಿಂನ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾದ ದಿಟ್ಟ ಕತೆಯಿದು…

-ವಿನೂತನ್ ಜೋಷಿ ಬೆಂಗಳೂರು Posted On November 30, 2017


  • Share On Facebook
  • Tweet It

ಹಾಗೆ ಸುಮ್ಮನೆ ಯೋಚಿಸಿ ನೋಡಿ. 8ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ಮಕ್ಕಳ ಮನಸ್ಥಿತಿಗೆ ಹೇಗಿರುತ್ತದೆ? ಅಪ್ಪನ ಕುರಿತು ಅವರಿಗೆ ಯಾವ ಕಲ್ಪನೆ ಇರುತ್ತದೆ? ಅಪ್ಪನೇ ಇಲ್ಲದ ಅವರು ಹೇಗೆ ಬದುಕುತ್ತಾರೆ? ಅವರ ಭವಿಷ್ಯ ಹೇಗಿರುತ್ತದೆ? ಒಂದೋ ಅವರು ಸಮಾಜದ ಕರುಣೆ, ಸಿಂಪತಿ ಮೇಲೆ ಬದುಕುತ್ತಾರೆ. ಇಲ್ಲ ಹೆಣಗುತ್ತಲೇ ಜೀವನ ಸಾಗಿಸುತ್ತಾರೆ.

ಅದರಲ್ಲೂ, ಒಬ್ಬ ಬಾಲಕ ಅಥವಾ ಬಾಲಕಿಯ ತಂದೆ ಸೈನ್ಯದಲ್ಲಿದ್ದು, ಆತ ದೇಶಕ್ಕಾಗಿ ಮೃತಪಟ್ಟರೆ ಇದಕ್ಕಿಂತಲೂ ವಿಷಯ ಪರಿಸ್ಥಿತಿ ಎದುರಾಗುತ್ತದೆ. ಒಂದೆಡೆ ದೇಶಕ್ಕಾಗಿ ತಂದೆ ಪ್ರಾಣ ಕೊಟ್ಟನಲ್ಲ ಎಂಬ ಹೆಮ್ಮೆ, ಇನ್ನೊಂದೆಡೆ ಆತನೇ ಹೋದ ಮೇಲೆ ಇನ್ನೇನು ಎಂಬ ಜುಗುಪ್ಸೆ.

ಸಿಕ್ಕಿಂನ ಅಪರಜಿತಾ ರೈ ಎಂಬಾಕೆಗೆ ಆಗಿದ್ದೂ ಇದೆ. ಆದರೆ, ಆಕೆ ಅಪ್ಪ ಹೋದನಲ್ಲ ಎಂದು ಹಣೆ ಮೇಲೆ ಕೈ ಹೊತ್ತು ಕೂರಲಿಲ್ಲ. ಮನೆಯಲ್ಲಿ ಅಮ್ಮನಿಗೆ ಭಾರವಾಗಲಿಲ್ಲ. ಬದಲಿಗೆ ಚೆನ್ನಾಗಿ ಓದಿ ಪ್ರತಿ ಹಂತದಲ್ಲೂ ಮುನ್ನಡೆ ಸಾಧಿಸಿದಳು. ಕೊನೆಗೆ ಅಪ್ಪನಂತೆಯೇ ಆಕೆ ಅಧಿಕಾರಿಯೂ ಆದಳು. ಬರೀ ಅಧಿಕಾರಿ ಅಲ್ಲ, ಐಪಿಎಸ್ ಆಫಿಸರ್. ಅಷ್ಟೇ ಅಲ್ಲ, ಅಪರಿಜಿತಾ ರೈ ಸಿಕ್ಕಿಂನ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.

ಹೌದು, ಅಪರಿಜಿತಾ ರೈಗೆ ಆಗ ಬರೀ ಎಂಟು ವರ್ಷ. ಡಿವಿಷನಲ್ ಪ್ರಾದೇಶಿಕ ಅರಣ್ಯ ಅಧಿಕಾರಿಯಾಗಿದ್ದ ಅಪ್ಪ ನಿಧನರಾದರು. ಅಂದಿನಿಂದ ಅಮ್ಮ ರೋಮಾ ರೈ ಅವಳೇ ತಂದೆಯೂ ಆದಳು. ಟೀಚರ್ ಆಗಿದ್ದ ಆಕೆಗೆ ಮಗಳನ್ನೂ ಗಂಡನಂತೆ ಅಧಿಕಾರಿ ಮಾಡುವ ಆಸೆ.

ಅದರಂತೆ ಅಪರಿಜಿತಾ ರೈ ಚೆನ್ನಾಗಿ ಓದಿದಳು. ಪಶ್ಚಿಮ ಬಂಗಾಳದ ನ್ಯಾಯಾಂಗ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಬಿಎ ಎಲ್ಎಲ್ ಬಿ ಪದವಿ ಪಡೆದಳು. 2010ರಲ್ಲಿ ನಾಗರಿಕ ಸೇವಾ ಪರೀಕ್ಷೆ ಬರೆದ ಆಕೆ ಮೊದಲ ಯತ್ನದಲ್ಲಿ ವಿಫಲವಾದಳು. ಆದರೇನಂತೆ, ಸಾಧಿಸುವ ಛಲ ಇತ್ತಲ್ಲ, ಮತ್ತೆ ಪರೀಕ್ಷೆ ಬರೆದಳು, ಅದರಲ್ಲಿ ಯಶಸ್ವಿಯೂ ಆಗಿ ಈಗ ಸಿಕ್ಕಿಂನ ಮೊದಲ ಮಹಿಳಾ ಐಪಿಎಸ್ ಆಫೀಸರ್ ಆಗಿದ್ದಾಳೆ. ಛಲ, ಸಾಧನೆ, ಹಠ ಎಂದರೆ ಇದೇ ಅಲ್ಲವೇ?

 

  • Share On Facebook
  • Tweet It


- Advertisement -


Trending Now
ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
-ವಿನೂತನ್ ಜೋಷಿ ಬೆಂಗಳೂರು September 29, 2023
ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
-ವಿನೂತನ್ ಜೋಷಿ ಬೆಂಗಳೂರು September 29, 2023
Leave A Reply

  • Recent Posts

    • ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
    • ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
  • Popular Posts

    • 1
      ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • 2
      ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • 3
      ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • 4
      ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • 5
      ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search