• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಅಪ್ಪನ ಕಳೆದುಕೊಂಡ ಅಪರಿಜಿತಾ ರೈ ಸಿಕ್ಕಿಂನ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾದ ದಿಟ್ಟ ಕತೆಯಿದು…

-ವಿನೂತನ್ ಜೋಷಿ ಬೆಂಗಳೂರು Posted On November 30, 2017
0


0
Shares
  • Share On Facebook
  • Tweet It

ಹಾಗೆ ಸುಮ್ಮನೆ ಯೋಚಿಸಿ ನೋಡಿ. 8ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ಮಕ್ಕಳ ಮನಸ್ಥಿತಿಗೆ ಹೇಗಿರುತ್ತದೆ? ಅಪ್ಪನ ಕುರಿತು ಅವರಿಗೆ ಯಾವ ಕಲ್ಪನೆ ಇರುತ್ತದೆ? ಅಪ್ಪನೇ ಇಲ್ಲದ ಅವರು ಹೇಗೆ ಬದುಕುತ್ತಾರೆ? ಅವರ ಭವಿಷ್ಯ ಹೇಗಿರುತ್ತದೆ? ಒಂದೋ ಅವರು ಸಮಾಜದ ಕರುಣೆ, ಸಿಂಪತಿ ಮೇಲೆ ಬದುಕುತ್ತಾರೆ. ಇಲ್ಲ ಹೆಣಗುತ್ತಲೇ ಜೀವನ ಸಾಗಿಸುತ್ತಾರೆ.

ಅದರಲ್ಲೂ, ಒಬ್ಬ ಬಾಲಕ ಅಥವಾ ಬಾಲಕಿಯ ತಂದೆ ಸೈನ್ಯದಲ್ಲಿದ್ದು, ಆತ ದೇಶಕ್ಕಾಗಿ ಮೃತಪಟ್ಟರೆ ಇದಕ್ಕಿಂತಲೂ ವಿಷಯ ಪರಿಸ್ಥಿತಿ ಎದುರಾಗುತ್ತದೆ. ಒಂದೆಡೆ ದೇಶಕ್ಕಾಗಿ ತಂದೆ ಪ್ರಾಣ ಕೊಟ್ಟನಲ್ಲ ಎಂಬ ಹೆಮ್ಮೆ, ಇನ್ನೊಂದೆಡೆ ಆತನೇ ಹೋದ ಮೇಲೆ ಇನ್ನೇನು ಎಂಬ ಜುಗುಪ್ಸೆ.

ಸಿಕ್ಕಿಂನ ಅಪರಜಿತಾ ರೈ ಎಂಬಾಕೆಗೆ ಆಗಿದ್ದೂ ಇದೆ. ಆದರೆ, ಆಕೆ ಅಪ್ಪ ಹೋದನಲ್ಲ ಎಂದು ಹಣೆ ಮೇಲೆ ಕೈ ಹೊತ್ತು ಕೂರಲಿಲ್ಲ. ಮನೆಯಲ್ಲಿ ಅಮ್ಮನಿಗೆ ಭಾರವಾಗಲಿಲ್ಲ. ಬದಲಿಗೆ ಚೆನ್ನಾಗಿ ಓದಿ ಪ್ರತಿ ಹಂತದಲ್ಲೂ ಮುನ್ನಡೆ ಸಾಧಿಸಿದಳು. ಕೊನೆಗೆ ಅಪ್ಪನಂತೆಯೇ ಆಕೆ ಅಧಿಕಾರಿಯೂ ಆದಳು. ಬರೀ ಅಧಿಕಾರಿ ಅಲ್ಲ, ಐಪಿಎಸ್ ಆಫಿಸರ್. ಅಷ್ಟೇ ಅಲ್ಲ, ಅಪರಿಜಿತಾ ರೈ ಸಿಕ್ಕಿಂನ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.

ಹೌದು, ಅಪರಿಜಿತಾ ರೈಗೆ ಆಗ ಬರೀ ಎಂಟು ವರ್ಷ. ಡಿವಿಷನಲ್ ಪ್ರಾದೇಶಿಕ ಅರಣ್ಯ ಅಧಿಕಾರಿಯಾಗಿದ್ದ ಅಪ್ಪ ನಿಧನರಾದರು. ಅಂದಿನಿಂದ ಅಮ್ಮ ರೋಮಾ ರೈ ಅವಳೇ ತಂದೆಯೂ ಆದಳು. ಟೀಚರ್ ಆಗಿದ್ದ ಆಕೆಗೆ ಮಗಳನ್ನೂ ಗಂಡನಂತೆ ಅಧಿಕಾರಿ ಮಾಡುವ ಆಸೆ.

ಅದರಂತೆ ಅಪರಿಜಿತಾ ರೈ ಚೆನ್ನಾಗಿ ಓದಿದಳು. ಪಶ್ಚಿಮ ಬಂಗಾಳದ ನ್ಯಾಯಾಂಗ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಬಿಎ ಎಲ್ಎಲ್ ಬಿ ಪದವಿ ಪಡೆದಳು. 2010ರಲ್ಲಿ ನಾಗರಿಕ ಸೇವಾ ಪರೀಕ್ಷೆ ಬರೆದ ಆಕೆ ಮೊದಲ ಯತ್ನದಲ್ಲಿ ವಿಫಲವಾದಳು. ಆದರೇನಂತೆ, ಸಾಧಿಸುವ ಛಲ ಇತ್ತಲ್ಲ, ಮತ್ತೆ ಪರೀಕ್ಷೆ ಬರೆದಳು, ಅದರಲ್ಲಿ ಯಶಸ್ವಿಯೂ ಆಗಿ ಈಗ ಸಿಕ್ಕಿಂನ ಮೊದಲ ಮಹಿಳಾ ಐಪಿಎಸ್ ಆಫೀಸರ್ ಆಗಿದ್ದಾಳೆ. ಛಲ, ಸಾಧನೆ, ಹಠ ಎಂದರೆ ಇದೇ ಅಲ್ಲವೇ?

 

0
Shares
  • Share On Facebook
  • Tweet It




Trending Now
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
-ವಿನೂತನ್ ಜೋಷಿ ಬೆಂಗಳೂರು November 20, 2025
ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
-ವಿನೂತನ್ ಜೋಷಿ ಬೆಂಗಳೂರು November 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
  • Popular Posts

    • 1
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • 2
      ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!

  • Privacy Policy
  • Contact
© Tulunadu Infomedia.

Press enter/return to begin your search