• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಅಪ್ಪನ ಕಳೆದುಕೊಂಡ ಅಪರಿಜಿತಾ ರೈ ಸಿಕ್ಕಿಂನ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾದ ದಿಟ್ಟ ಕತೆಯಿದು…

-ವಿನೂತನ್ ಜೋಷಿ ಬೆಂಗಳೂರು Posted On November 30, 2017
0


0
Shares
  • Share On Facebook
  • Tweet It

ಹಾಗೆ ಸುಮ್ಮನೆ ಯೋಚಿಸಿ ನೋಡಿ. 8ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ಮಕ್ಕಳ ಮನಸ್ಥಿತಿಗೆ ಹೇಗಿರುತ್ತದೆ? ಅಪ್ಪನ ಕುರಿತು ಅವರಿಗೆ ಯಾವ ಕಲ್ಪನೆ ಇರುತ್ತದೆ? ಅಪ್ಪನೇ ಇಲ್ಲದ ಅವರು ಹೇಗೆ ಬದುಕುತ್ತಾರೆ? ಅವರ ಭವಿಷ್ಯ ಹೇಗಿರುತ್ತದೆ? ಒಂದೋ ಅವರು ಸಮಾಜದ ಕರುಣೆ, ಸಿಂಪತಿ ಮೇಲೆ ಬದುಕುತ್ತಾರೆ. ಇಲ್ಲ ಹೆಣಗುತ್ತಲೇ ಜೀವನ ಸಾಗಿಸುತ್ತಾರೆ.

ಅದರಲ್ಲೂ, ಒಬ್ಬ ಬಾಲಕ ಅಥವಾ ಬಾಲಕಿಯ ತಂದೆ ಸೈನ್ಯದಲ್ಲಿದ್ದು, ಆತ ದೇಶಕ್ಕಾಗಿ ಮೃತಪಟ್ಟರೆ ಇದಕ್ಕಿಂತಲೂ ವಿಷಯ ಪರಿಸ್ಥಿತಿ ಎದುರಾಗುತ್ತದೆ. ಒಂದೆಡೆ ದೇಶಕ್ಕಾಗಿ ತಂದೆ ಪ್ರಾಣ ಕೊಟ್ಟನಲ್ಲ ಎಂಬ ಹೆಮ್ಮೆ, ಇನ್ನೊಂದೆಡೆ ಆತನೇ ಹೋದ ಮೇಲೆ ಇನ್ನೇನು ಎಂಬ ಜುಗುಪ್ಸೆ.

ಸಿಕ್ಕಿಂನ ಅಪರಜಿತಾ ರೈ ಎಂಬಾಕೆಗೆ ಆಗಿದ್ದೂ ಇದೆ. ಆದರೆ, ಆಕೆ ಅಪ್ಪ ಹೋದನಲ್ಲ ಎಂದು ಹಣೆ ಮೇಲೆ ಕೈ ಹೊತ್ತು ಕೂರಲಿಲ್ಲ. ಮನೆಯಲ್ಲಿ ಅಮ್ಮನಿಗೆ ಭಾರವಾಗಲಿಲ್ಲ. ಬದಲಿಗೆ ಚೆನ್ನಾಗಿ ಓದಿ ಪ್ರತಿ ಹಂತದಲ್ಲೂ ಮುನ್ನಡೆ ಸಾಧಿಸಿದಳು. ಕೊನೆಗೆ ಅಪ್ಪನಂತೆಯೇ ಆಕೆ ಅಧಿಕಾರಿಯೂ ಆದಳು. ಬರೀ ಅಧಿಕಾರಿ ಅಲ್ಲ, ಐಪಿಎಸ್ ಆಫಿಸರ್. ಅಷ್ಟೇ ಅಲ್ಲ, ಅಪರಿಜಿತಾ ರೈ ಸಿಕ್ಕಿಂನ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ.

ಹೌದು, ಅಪರಿಜಿತಾ ರೈಗೆ ಆಗ ಬರೀ ಎಂಟು ವರ್ಷ. ಡಿವಿಷನಲ್ ಪ್ರಾದೇಶಿಕ ಅರಣ್ಯ ಅಧಿಕಾರಿಯಾಗಿದ್ದ ಅಪ್ಪ ನಿಧನರಾದರು. ಅಂದಿನಿಂದ ಅಮ್ಮ ರೋಮಾ ರೈ ಅವಳೇ ತಂದೆಯೂ ಆದಳು. ಟೀಚರ್ ಆಗಿದ್ದ ಆಕೆಗೆ ಮಗಳನ್ನೂ ಗಂಡನಂತೆ ಅಧಿಕಾರಿ ಮಾಡುವ ಆಸೆ.

ಅದರಂತೆ ಅಪರಿಜಿತಾ ರೈ ಚೆನ್ನಾಗಿ ಓದಿದಳು. ಪಶ್ಚಿಮ ಬಂಗಾಳದ ನ್ಯಾಯಾಂಗ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಬಿಎ ಎಲ್ಎಲ್ ಬಿ ಪದವಿ ಪಡೆದಳು. 2010ರಲ್ಲಿ ನಾಗರಿಕ ಸೇವಾ ಪರೀಕ್ಷೆ ಬರೆದ ಆಕೆ ಮೊದಲ ಯತ್ನದಲ್ಲಿ ವಿಫಲವಾದಳು. ಆದರೇನಂತೆ, ಸಾಧಿಸುವ ಛಲ ಇತ್ತಲ್ಲ, ಮತ್ತೆ ಪರೀಕ್ಷೆ ಬರೆದಳು, ಅದರಲ್ಲಿ ಯಶಸ್ವಿಯೂ ಆಗಿ ಈಗ ಸಿಕ್ಕಿಂನ ಮೊದಲ ಮಹಿಳಾ ಐಪಿಎಸ್ ಆಫೀಸರ್ ಆಗಿದ್ದಾಳೆ. ಛಲ, ಸಾಧನೆ, ಹಠ ಎಂದರೆ ಇದೇ ಅಲ್ಲವೇ?

 

0
Shares
  • Share On Facebook
  • Tweet It




Trending Now
ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
-ವಿನೂತನ್ ಜೋಷಿ ಬೆಂಗಳೂರು July 15, 2025
ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
-ವಿನೂತನ್ ಜೋಷಿ ಬೆಂಗಳೂರು July 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
  • Popular Posts

    • 1
      ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • 2
      ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • 3
      ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • 4
      ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • 5
      ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!

  • Privacy Policy
  • Contact
© Tulunadu Infomedia.

Press enter/return to begin your search