• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ತೊಡೆ ತಟ್ಟಿಸಿಕೊಂಡ ಬಳಿಕ ರಾಜಕಾರಣಕ್ಕೆ ಬಂದು ಏನು ಮಾಡುತ್ತೀರಿ ಪ್ರಕಾಶ್ ರೈ?

ವಿಶಾಲ್ ಗೌಡ, ಕುಶಾಲನಗರ Posted On January 1, 2018
0


0
Shares
  • Share On Facebook
  • Tweet It

ನಾನು ಜನ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ನಿಮ್ಮ ಮನೆಯ ಮಗನಾಗಿ, ಅಣ್ಣನಾಗಿ ಕೆಲಸ ಮಾಡುತ್ತೇನೆ ಎಂದು ರಾಜಕೀಯಕ್ಕೆ ಬಂದು ತಕ್ಕದಾದ ಸೇವೆ ಸಲ್ಲಿಸುವವರನ್ನು ನೋಡಿದ್ದೇವೆ. ಇನ್ನು ಪ್ರಧಾನಿಯಾದಾಗಿನಿಂದಲೂ ಒಂದು ದಿನವೂ ರಜೆ ತೆಗೆದುಕೊಳ್ಳದೆ ದೇಶಕ್ಕಾಗಿ ದುಡಿಯುವ ಪ್ರಧಾನಿ ನರೇಂದ್ರ ಮೋದಿ ಅವರಂಥ ಅಪ್ರತಿಮ ಜನಸೇವಕ ಕಮ್ ರಾಜಕಾರಣಿಯನ್ನು ಕಂಡಿದ್ದೇವೆ.

ಆದರೆ ಇದೆಲ್ಲದಕ್ಕಿಂತ ಡಿಫರೆಂಟು ನಟ ಪ್ರಕಾಶ್ ರೈ ಅಲಿಯಾಸ್ ಪ್ರಕಾಶ್ ರಾಜ್ ಅವರ ಶೈಲಿ…

“ನನಗೆ ಯಾರಾದರೂ ಬಲವಂತ ಮಾಡಿದರೆ, ನನ್ನ ವಿರುದ್ಧ ಯಾರಾದರೂ ತೊಡೆ ತಟ್ಟಿದರೆ ನಾನು ಯಾವಾಗಲೂ ರಾಜಕೀಯಕ್ಕೆ ಬರಲು ಸಿದ್ಧ”…

ಪ್ರೆಸ್ ಕ್ಲಬ್ ನಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರಕಾಶ್ ರೈ ನೀಡಿದ ಹೇಳಿಕೆ ಇದು.

ಹೇಳಿ ಯಾರು ತಾನೆ ರಾಜಕೀಯ ಸೇರಲು ಹೀಗೆ ಮಾತನಾಡುತ್ತಾರೆ? ರಾಜಕಾರಣಿಯಾದವನ, ಆಗುವವನ ಮನದಾಳ ಏನಿರಬೇಕು? ಇಷ್ಟು ದಿನ ಸುಮ್ಮನಿದ್ದು, ಕಾವೇರಿ ವಿಷಯದಲ್ಲಿ ಮಗುಮ್ಮಾಗಿದ್ದು ಈಗ ರಾಜ್ಯದ ವಿಚಾರಗಳಲ್ಲಿ ಮೂಗು ತೂರಿಸುತ್ತಿರುವ ಪ್ರಕಾಶ್ ರೈ ಏನು ಹೇಳಲು ಹೊರಟಿದ್ದಾರೆ.

ಖಂಡಿತವಾಗಿಯೂ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯಾರು ಬೇಕಾದರೂ ರಾಜಕಾರಣಕ್ಕೆ ಬರಬಹುದು. ಅಷ್ಟಕ್ಕೂ ಟೀ ಮಾರುತ್ತಿದ್ದ ನರೇಂದ್ರ ಮೋದಿ ಅವರು ಇಂದು ಪ್ರಧಾನಿಯಾಗಿರುವುದು ದೇಶದ ಪ್ರಜಾಪ್ರಭುತ್ವದ ಗರಿಮೆಯೇ ಸರಿ. ಆದರೆ, ಪ್ರಕಾಶ್ ರೈ ಹೇಳಿರುವ ಹೇಳಿಕೆ ಹಿಂದಿನ ಸಂದೇಶವೇನು?

ಸ್ವಾಮಿ ಪ್ರಕಾಶ್ ರೈ ಅವರೇ, ನಿಮಗೆ ಅಷ್ಟು ಜನ ಬೆಂಬಲ ಇದ್ದರೆ, ಜನರ ಸೇವೆ ಮಾಡಬೇಕು ಎಂಬ ಉತ್ಕಟ ಮನೋಭಿಲಾಷೆ ಇದ್ದರೆ ಖಂಡಿತವಾಗಿಯೂ ರಾಜಕೀಯಕ್ಕೆ ಬನ್ನಿ. ಬಂದು ಜಯಿಸಿದರೆ ಜನರ ಸೇವೆ ಮಾಡಿ. ಯಾರಿಗೂ, ಯಾವುದೂ ತಕರಾರಿಲ್ಲ.

ಆದರೆ ನೀವು ಕರ್ನಾಟಕದಲ್ಲಿ ರಾಜಕೀಯ ಮಾಡಲು ಯಾರು ಒತ್ತಾಯ ಮಾಡಬೇಕು? ಯಾರು ಏಕೆ ನಿಮ್ಮ ವಿರುದ್ಧ ತೊಡೆತಟ್ಟಿ ರಾಜಕೀಯಕ್ಕೆ ಬನ್ನಿ ಎಂದು ಪಂಥಾಹ್ವಾನ ನೀಡಬೇಕು? ತೊಡೆತಟ್ಟಿದರೇ ಬರಬೇಕು ಎನ್ನಲು ರಾಜಕೀಯವೇನು ಕುಸ್ತಿ ಅಖಾಡವೇ? ಅಷ್ಟಕ್ಕೂ ನೀವು ಬರಬೇಕು ಎಂದು ಬಯಸುತ್ತಿರುವುದು ರಾಜಕೀಯಕ್ಕೋ, ಯಾರದೋ ವಿರುದ್ಧ ಹೋರಾಡಲೋ? ಅಥವಾ ಜನ ಸೇವೆ ಮಾಡಲೋ? ರಾಜಕೀಯ ಎಂದರೆ ಕಾಳಗ ಭೂಮಿ ಎಂದುಕೊಂಡಿರಾ?

ಇನ್ನು ದೇಶದಲ್ಲಿ ಹಿಟ್ಲರ್ ಅಂಥ ಆಡಳಿತ ಇದೆ ಎನ್ನುವ ನೀವು, ಸಮಾಜದಲ್ಲಿ ಆಗುವ, ಗೌರಿ ಲಂಕೇಶ್ ಹತ್ಯೆ ಖಂಡಿಸುವ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ನೀವು ಬಿಜೆಪಿ ಆರೆಸ್ಸೆಸ್ ಕಾರ್ಯಕರ್ತರ ಕೊಲೆ, ಲವ್ ಜಿಹಾದ್, ಕ್ರೈಸ್ತರ ಮತಾಂತರದ ಕುರಿತು ಏಕೆ ಧ್ವನಿ ಎತ್ತುವುದಿಲ್ಲ? ಯಾವ ಅಳಕು ನಿಮ್ಮನ್ನು ಕಾಡುತ್ತದೆ ಎಂದು ಕೇಳಬಹುದೆ?

ರಾಜಕೀಯ, ರಾಜಕಾರಣಿ ಎಂಬುದಕ್ಕೆ ಪ್ರಜಾಪ್ರಭುತ್ವದಲ್ಲಿ ವಿಶಾಲ ಅರ್ಥವಿದೆ. ಸೇವೆಗೆ ಪರ್ಯಾಯವಾಗಿ ನಾವು ಭಾವಿಸಿದ್ದೇವೆ ಹಾಗೂ ಅದೇ ಭಾವನೆಯಿಂದ ಮತ ಹಾಕುತ್ತೇವೆ. ಆದರೆ ಅದನ್ನು ಕುಸ್ತಿಯ ಅಖಾಡ ಮಾಡಲು ಹೊರಟಿರುವ ನಿಮ್ಮ ಮನೋಭಾವಕ್ಕೆ ಏನೆನ್ನಬೇಕೋ ಗೊತ್ತಾಗುತ್ತಿಲ್ಲ.

 

0
Shares
  • Share On Facebook
  • Tweet It




Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
ವಿಶಾಲ್ ಗೌಡ, ಕುಶಾಲನಗರ December 23, 2025
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
ವಿಶಾಲ್ ಗೌಡ, ಕುಶಾಲನಗರ December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
  • Popular Posts

    • 1
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • 2
      ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • 3
      ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • 4
      ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • 5
      ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!

  • Privacy Policy
  • Contact
© Tulunadu Infomedia.

Press enter/return to begin your search