• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಫುಟ್ಬಾತ್ ನುಂಗಿದ ಶಾಸಕ ಲೋಬೋ

Shri Mane Posted On March 20, 2018


  • Share On Facebook
  • Tweet It

ಪಾದಚಾರಿ ಮಾರ್ಗದಲ್ಲಿ ಬೈಕ್ ಪಾರ್ಕಿಂಗ್ ಮಾಡಿ ಹೋದವರನ್ನು ಹಿಡಿದು ದಂಡ ಕಟ್ಟಿಸಿಕೊಳ್ಳುವವರು ಇಲ್ಲೊಬ್ಬರು ಪಾದಚಾರಿ ಮಾರ್ಗವನ್ನು ನುಂಗಿ ನೀರು ಕುಡಿದರೂ ಸುಮ್ಮನೆ ಬಿಟ್ಟಿದ್ದಾರೆ. ಯಾಕೆಂದರೆ ಅವರು ಮಂಗಳೂರು ನಗರದ ಶಾಸಕರು ಅಲ್ಲವೋ!
ಹಾಗಾಗಿ ಮಾನ್ಯ ಶಾಸಕರು ಯಾವ ಕಾನೂನನ್ನು ಬೇಕಾದರೂ ಮುರಿದು ಅಟ್ಟಕ್ಕೆಸೆಯಬಹುದು. ಅದನ್ನು ಸಾರ್ವಜನಿಕರು ಬಾಯಿ ಮುಚ್ಚಿಕೊಂಡು ನೋಡಬೇಕೇ ಹೊರತು ಬಾಯಿ ಬಿಟ್ಟು ಕೇಳುವಂತಿಲ್ಲ. ಇದು ಸದ್ಯದ ಮಂಗಳೂರಿನ ನತದೃಷ್ಟ ನಾಗರಿಕರ ಪರಿಸ್ಥಿತಿ!

ಈ ಫ್ಲೆಕ್ಸ್ ಕಂಡು ಬಂದಿರುವುದು ಮಂಗಳೂರಿನ ಬಲ್ಮಠ ರಸ್ತೆಯ ಫುಟ್ಬಾತ್ ನಲ್ಲಿ. ಮೊದಲೇ ಇಲ್ಲಿನ ಫುಟ್ಬಾತ್ ಹೇಳಿಕೊಳ್ಳುವ ಮಟ್ಟಕ್ಕಿಲ್ಲ. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದರೂ ತಪ್ಪಿಲ್ಲ. ಹೋಗಲಿ, ಇದೇ ನಮ್ಮ ಪಾಲಿನ ಪುಣ್ಯ ಅಂದುಕೊಂಡು ಸಾರ್ವಜನಿಕರು ಈ ಫುಟ್ಬಾತ್ ಬಳಸುತ್ತಿರುವಾಗಲೇ ಇದರ ಮೇಲೆ ಶಾಸಕರ ಕಣ್ಣು ಬಿದ್ದಿದೆ. ತಡ ಮಾಡದೇ ಆ ಜಾಗದಲ್ಲಿ ರಾಹುಲ್ ಗಾಂಧಿಗೆ ಶುಭ ಕೋರುವ ಫ್ಲೆಕ್ಸ್ ತಲೆ ಎತ್ತಿ ನಿಂತಿದೆ. ಮುಂದೇನು? ಪಾದಚಾರಿಗಳು ಅನಿವಾರ್ಯವಾಗಿ ರಸ್ತೆಗೆ ಇಳಿಯುತ್ತಾರೆ. ಹಾಗಾದರೆ ವಾಹನಗಳು?

ಶಾಸಕರ ಮನೆಯಂಗಳದಲ್ಲಿ ಚಲಿಸಬೇಕಾ? ಗೊತ್ತಿಲ್ಲ!

ಪಾದಚಾರಿ ಮಾರ್ಗಕ್ಕೆ ಅಡ್ಡವಾಗಿ ತಮ್ಮ ಫ್ಲೆಕ್ಸ್ ಹಾಕಿಸಿಕೊಂಡು ಶಾಸಕ ಲೋಬೋ ಅವರು ಪಾದಚಾರಿಗಳಿಗೆ ಕಿರಿಕಿರಿಯುಂಟು ಮಾಡಿದ್ದರೆ, ಸ್ವಲ್ಪ ದೂರದಲ್ಲಿರುವ ಜ್ಯೋತಿ ಅಂಬೇಡ್ಕರ್ ವೃತ್ತದ ಸಿಗ್ನಲ್ ಮೇಲೆ-ಕೆಳಗೆ, ಹಿಂದೆ-ಮುಂದೆ, ಆಚೆ-ಈಚೆ, ರಾಹುಲ್ ಗಾಂಧಿಯನ್ನು ಸ್ವಾಗತಿಸಲು ಬಂಟಿಂಗ್ಸ್ ಹಾಕಲಾಗಿದೆ. ಇಲ್ಲೂ ಕೂಡಾ ಕಾನೂನು ಉಲ್ಲಂಘನೆಯಾಗಿ ವಾಹನ ಸವಾರರು ತೀವ್ರ ಪರದಾಡುವಂತಾಗಿದೆ.

ಸಾರ್ವಜನಿಕರಿಗೆ ತೊಂದರೆ ಕೊಟ್ಟು ರಾಹುಲ್ ಗಾಂಧಿಯವರನ್ನು ಸ್ವಾಗತಿಸಿದರೆ ಮಾತ್ರ ಅವರು ಸಂತುಷ್ಟರಾಗುತ್ತಾರೆಯೇ? ಇಲ್ಲವಾದರೆ ಯಾಕೆ ತೊಂದರೆ ಕೊಟ್ಟಿಲ್ಲ ಅಂತ ಕಿವಿ ಹಿಂಡುತ್ತಾರೆಯೇ? ಸ್ವಾಮಿ ಶಾಸಕರೇ, ನಿಮ್ಮಂತಹ ಶ್ರೀಮಂತರಿಗೆ ಫುಟ್ಬಾತ್ ಫ್ಲೆಕ್ಸ್ ಹಾಕಿಸಿಕೊಳ್ಳಲು ಇರುವ ಜಾಗವಾಗಿರಬಹುದು. ಆದರೆ ಬಡಪಾಯಿಗಳಿಗೆ ಫುಟ್ಬಾತ್ ಅನಿವಾರ್ಯ ಪಾದಚಾರಿ ಮಾರ್ಗ ಎನ್ನುವುದನ್ನು ಮರೆಯದಿರಿ.

ಮಂಗಳೂರು ಮಹಾನಗರ ಪಾಲಿಕೆ ಇದನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಇದು ಬೇಜವಾಬ್ದಾರಿಯೋ? ಜಾಣ ಕುರುಡೋ?

ಒಂದು ವೇಳೆ ದುರದೃಷ್ಟವಶಾತ್ ಪಾದಚಾರಿಯೊಬ್ಬ ಅನಿವಾರ್ಯವಾಗಿ ರಸ್ತೆಯ ಮೇಲೆಯೇ ನಡೆದುಕೊಂಡು ಹೋಗಿ ವಾಹನ ಸವಾರರಿಂದ ಅವಘಡ ಸಂಭವಿಸಿ ಬಿಟ್ಟರೆ ಏನು ಗತಿ? ಬಡಪಾಯಿಗಳ ಪ್ರಾಣ ಹೋದರೆ ಇವರ್ಯಾರೂ ತಲೆ ಕೆಡಿಸಿಕೊಳ್ಳಲ್ಲ ಬಿಡಿ. ಹಾಗಂತ ಸಣ್ಣಪುಟ್ಟ ಗಾಯಗಳಾದರೆ ಯಾರ ಮೇಲೆ ಪ್ರಕರಣ ದಾಖಲಿಸುವುದು? ಪಾದಚಾರಿಯ ಮೇಲೋ? ವಾಹನ ಸವಾರನ ಮೇಲೋ? ಅಥವಾ ಇದಕ್ಕೆಲ್ಲಾ ಮೂಲ ಕಾರಣಕರ್ತರಾದ ಶಾಸಕರ ಮೇಲೋ? ಅಥವಾ ಬೇಜವಾಬ್ದಾರಿ ತೋರಿದ ಮಂಗಳೂರು ಮಹಾನಗರ ಪಾಲಿಕೆಯ ಮೇಲೋ? ಪ್ರಶ್ನೆಗಳು ನೂರಾರು. ಉತ್ತರ ಮಾತ್ರ ಶೂನ್ಯ.

ಒಟ್ಟಿನಲ್ಲಿ “ರಾಹುಲ್ ಗಾಂಧಿ ಮಂಗಳೂರಿಗೆ ಬಂದರೆ ಪಾದಚಾರಿಗಳಿಗೆ ಕಿರಿಕಿರಿ, ಸಿಗ್ನಲ್ ಸರಿಯಾಗಿ ಕಾಣಿಸದೇ ವಾಹನ ಸವಾರರಿಗೆ ಗಲಿಬಿಲಿ” ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

  • Share On Facebook
  • Tweet It


- Advertisement -


Trending Now
ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
Shri Mane July 5, 2022
ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
Shri Mane July 4, 2022
Leave A Reply

  • Recent Posts

    • ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
    • ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
  • Popular Posts

    • 1
      ಮರಳು ಕದಿಯಲು ಹೋದ ದೋಣಿ ಮಗುಚಿ ಸತ್ತವನ ಕಥೆ ಏನು?
    • 2
      ನುಪೂರ್ ಕ್ಷಮೆ ಕೇಳಬೇಕು ಎಂದ ನ್ಯಾಯಾಧೀಶರ ಹೇಳಿಕೆ ಮತ್ತು ವಾಸ್ತವ!
    • 3
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 4
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 5
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search