• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮಂಗಳೂರು ಈ ಪರಿ ನೆರೆ ಕಾಣಲು ಇರುವ ಕಾರಣಗಳೇನು!!

Hanumantha Kamath Posted On May 30, 2018


  • Share On Facebook
  • Tweet It

ಇಂತಹ ಮಳೆಯನ್ನು ನಾನು ಯಾವತ್ತೂ ಕಾಣಲಿಲ್ಲ ಮಾರಾಯ್ರೆ ಎಂದು ಹಲವಾರು ಜನ ಮಂಗಳವಾರ ಬೆಳಿಗ್ಗೆ ಸರಿಯಾಗಿ ಹತ್ತು ಗಂಟೆಗೆ ಡ್ಯೂಟಿಗೆ ಬಂದವನಂತೆ ಕಾಣಿಸುತ್ತಿದ್ದ ವರುಣನ ಬಗ್ಗೆ ಹೇಳಿದ್ದನ್ನು ನೀವು ಕೇಳಿರಬಹುದು. ಮಳೆರಾಯ ಕೂಡ ಭೂಮಿಯನ್ನು ನೋಡದೇ ಹಲವಾರು ದಿನ ಆದವನಂತೆ ದುಮ್ಮಿಕ್ಕಿದ ರೀತಿಯನ್ನು ನೋಡಿದವರಿಗೆ ಇವನು ಸದ್ಯಕ್ಕೆ ಹೋಗಲ್ಲ ಎಂದು ಅನಿಸಿದ್ದು ಮಧ್ಯಾಹ್ನದ ಹೊತ್ತಿಗೆ. ಚಂದಿರ ಆಗಸದಲ್ಲಿ ಕಾಣಿಸುತ್ತಿದ್ದಂತೆ ಸುಸ್ತಾದ ವರುಣದೇವ ತನ್ನ ಪಾಡಿಗೆ ತಾನು ಅಪರಾತ್ರಿಯ ಯಾವುದೋ ಘಳಿಗೆಯಲ್ಲಿ ಹೊರಟು ಹೋಗಿದ್ದಾನೆ. ಪ್ರಕೃತಿಯ ಒಡಲು ತಂಪಾಗಿದೆ. ಎಲ್ಲಿಯ ತನಕ ಅಂದರೆ ಮಳೆಯ ನೀರು ಸಮುದ್ರವನ್ನು ಸೇರುವ ಧಾವಂತದಲ್ಲಿ ಹೋದರೂ ಸಮುದ್ರ ಯಾವ ದಾಕ್ಷಿಣ್ಯವೂ ಇಲ್ಲದೆ ಹಿಂದಕ್ಕೆ ದೂಡಿದ ಪರಿಣಾಮವಾಗಿ ಮಳೆ ಹೋದ ದಾರಿಗೆ ಸುಂಕವಿಲ್ಲದೇ ಮುಖ್ಯರಸ್ತೆಯಲ್ಲಿ ಬೀಡುಬಿಟ್ಟಿತ್ತು. ಮಂಗಳವಾರ ಕೊಟ್ಟಾರಚೌಕಿ, ಬಳ್ಳಾಲ್ ಬಾಗ್, ಪಡೀಲ್ ಸಹಿತ ಅನೇಕ ಕಡೆ ಚರಂಡಿ ಯಾವುದು, ರಸ್ತೆ ಯಾವುದು ಎಂದು ಗೊತ್ತಾಗದೇ ಜನ ಗೊಂದಲಕ್ಕೆ ಈಡಾದರು. ಬುಧವಾರ ಮಳೆಯ ನೀರು ನಿಂತ ಕುರುಹುಗಳು ಅಲ್ಲಲ್ಲಿ ಕಾಣುತ್ತಿವೆ. ಈಗ ಈ ಪರಿಸ್ಥಿತಿ ಮತ್ತೆ ಬಾರದಿರಲಿ ಎನ್ನುವ ಪ್ರಾರ್ಥನೆ ಎಲ್ಲಾ ಕಡೆ ಕೇಳಿಬರುತ್ತಿದೆ.

ಗದ್ದೆಗಳಲ್ಲಿ ಈಗ ಫ್ಲಾಟ್ಸ್…

ಮಂಗಳವಾರ ಮಂಗಳೂರಿನ ಪರಿಸ್ಥಿತಿಗೆ ಅರ್ಧ ಪ್ರಕೃತಿ ಕಾರಣವಾದರೆ ಉಳಿದರ್ಧ ನಮ್ಮ ಅಂದರೆ ಜನರ ಸ್ವಯಂಕೃತಾಪರಾಧ. ನಾವು ಸರಿಯಾಗಿದ್ದರೆ ಮಳೆರಾಯ ಎಲ್ಲಿ ಹರಿಯಬೇಕೋ ಅಲ್ಲಿ ಹರಿಯುತ್ತಿದ್ದ. ಇದು ಒಂದು ರೀತಿಯಲ್ಲಿ ಅರಣ್ಯಗಳು ಕಡಿಮೆಯಾಗುತ್ತಿದ್ದಂತೆ ವನ್ಯಜೀವಿಗಳು ನಾಡಿಗೆ ದಾಳಿ ಇಡುತ್ತವೆಯಲ್ಲ ಹಾಗಿತ್ತು ಪರಿಸ್ಥಿತಿ. ನೀವು ಮೂವತ್ತು, ನಲ್ವತ್ತು ವರ್ಷಗಳ ಹಿಂದಿನ ಮಂಗಳೂರು ನಗರದ ಚಿತ್ರಣವನ್ನು ಎಲ್ಲಿಯಾದರೂ ಹಳೆಫೋಟೋಗಳಲ್ಲಿ ಇದ್ದರೆ ನೋಡಿ. ಎಂಜಿ ರಸ್ತೆಯ ಅಕ್ಕಪಕ್ಕದಲ್ಲಿ ಎಷ್ಟು ವಸತಿ ಸಮುಚ್ಚಯಗಳಿದ್ದವು ಎನ್ನುವುದು ಗೊತ್ತಾಗುತ್ತದೆ. ಹೆಚ್ಚಿನ ಕಡೆಗಳಲ್ಲಿ ಇದ್ದದ್ದು ಗದ್ದೆಗಳು. ಮಳೆಯ ನೀರು ಸಮುದ್ರಕ್ಕೆ ಹೋಗುವಾಗ ಹೆಚ್ಚಾದರೆ ಈ ಗದ್ದೆಗಳಿಗೆ ಮರಳುತ್ತಿತ್ತು. ಈ ಮೂಲಕ ಸಮತೋಲನ ಕಾಣುತ್ತಿತ್ತು. ಆದರೆ ಕಾಲಕ್ರಮೇಣ ನಗರದ ಗದ್ದೆಗಳು ಬಿಲ್ಡರ್ ಗಳ ಪಾಲಾದವು. ವಸತಿ ಸಮುಚ್ಚಯಗಳು, ವಾಣಿಜ್ಯ ಸಂಕಿರ್ಣಗಳು ತಲೆ ಎತ್ತಿದವು. ಗದ್ದೆಗಳು ಫೋಟೋಗಳಿಗೆ ಬಾಕಿಯಾದವು.
ವಸತಿ ಸಮುಚ್ಚಯಗಳು ಹೆಚ್ಚಾದಂತೆ ಅವುಗಳಿಗೆ ಮೂಲಭೂತ ಸೌಕರ್ಯಗಳನ್ನು ಕೊಡಬೇಕಾಗಿರುವುದು ಸ್ಥಳೀಯಾಡಳಿತದ ಜವಾಬ್ದಾರಿ. ಸ್ಥಳೀಯಾಡಳಿತ 1969 ರಲ್ಲಿ ಪೈಪುಗಳನ್ನು ಹಾಕುವ ಮೂಲಕ ಒಳಚರಂಡಿ ವ್ಯವಸ್ಥೆಗೆ ಚಾಲನೆ ಕೊಟ್ಟಿತ್ತು. ಇವತ್ತಿಗೂ 49 ವರ್ಷಗಳ ಬಳಿಕ ಅವೇ ಪೈಪುಗಳು ಇವೆ. ಮಂಗಳೂರಿನ ಜನಸಂಖ್ಯೆ ನಾಲ್ಕು ಪಟ್ಟು ಜಾಸ್ತಿಯಾಗಿದೆ. ಆವತ್ತು ಜನಸಂಖ್ಯೆ ಒಂದು ಲಕ್ಷ ಇದ್ದರೆ ಈಗ ಐದು ಲಕ್ಷ. ಇನ್ನು ಪಾಲಿಕೆ ಆವತ್ತು ಹಾಕಿದ್ದ ಎರಡು ಇಂಚು ಪೈಪುಗಳು ಹಳೆಯದಾಗಿವೆ. ಈಗ ಇವರು ಕನಿಷ್ಟ 10 ಇಂಚಿನ ಪೈಪಾದರೂ ಹಾಕಬೇಕು. ಹಾಕದ ಪರಿಣಾಮವಾಗಿ ಕೃತಕ ನೆರೆ ನಮ್ಮ ಮನೆಯ ಬಾಗಿಲನ್ನು ಪ್ರವೇಶಿಸಿವೆ.

ಕಬ್ಬಿಣದ ಜಾಲಿಯನ್ನು ಕ್ಯಾರೇ ಮಾಡಲಿಲ್ಲ….

ಇನ್ನು ಕಾಂಕ್ರೀಟ್ ರಸ್ತೆಯ ಬಳಿಕ ಫುಟ್ ಪಾತ್ ಮಾಡುವಾಗ ಕರ್ಬ್ ಸ್ಟೂನ್ ಎನ್ನುವ ವ್ಯವಸ್ಥೆ ಇದೆ. ಅದಕ್ಕೆ ಸಣ್ಣ ಸಣ್ಣ ತೂತುಗಳನ್ನು ಇಡಲಾಗುತ್ತದೆ. ಆದರೆ ಮಳೆಗಾಲ ಪ್ರಾರಂಭವಾಗುವ ಹದಿನೈದು ದಿನಗಳಿರುವಾಗ ಅದನ್ನು ಸ್ವಚ್ಚ ಮಾಡದಿದ್ದಲ್ಲಿ ಆ ಜಾಗದಲ್ಲಿ ಮಣ್ಣು, ಮರಳು ನಿಂತು ನೀರು ಚರಂಡಿಗೆ ಇಳಿಯಲು ಆಗುವುದಿಲ್ಲ. ಇನ್ನು ಕೆಲವಡೆ ತೂತುಗಳನ್ನು ರಸ್ತೆಯಿಂದ ಮೇಲೆ ಇಡಲಾಗುತ್ತದೆ. ಇದರಿಂದ ನೀರು ಒಳಪ್ರವೇಶಿಸಲು ಕಷ್ಟವಾಗಿ ನೀರು ಒಳಗೆ ಹೋಗುವುದಿಲ್ಲ.
ಇನ್ನು ಕಾಂಕ್ರೀಟ್ ರಸ್ತೆಗಳಿಗೆ ಕಬ್ಬಿಣದ ಜಾಲಿಯನ್ನು ಅಳವಡಿಸುವ ಕ್ರಮ ಇದೆ. ನೀರು ರಸ್ತೆಯಲ್ಲಿ ಬಿದ್ದಾಗ ಅದು ಕಬ್ಬಿಣದ ಜಾಲಿಯಿಂದ ಕೆಳಗೆ ಇಳಿಯಲಿ ಎನ್ನುವ ಉದ್ದೇಶ. ಆದರೆ ಹಲವೆಡೆ ಏನಾಗುತ್ತದೆ ಎಂದರೆ ಕಬ್ಬಿಣದ ಜಾಲಿಯಲ್ಲಿ ನೀರು ಪ್ರವೇಶಿಸದ ಹಾಗೆ ಗಿಡಗಂಟೆಗಳು ಬೆಳೆದಿರುವುದನ್ನು ನೀವು ನೋಡಿರಬಹುದು.
ಮೇಲ್ನೋಟಕ್ಕೆ ನೋಡುವಾಗ ಇದೆಲ್ಲ ಚಿಕ್ಕ ವಿಷಯಗಳು ಅನಿಸಬಹುದು. ಅನೇಕ ಬಾರಿ ಎಪ್ರಿಲ್-ಮೇ ತಿಂಗಳಲ್ಲಿ ಬಿರು ಬೇಸಿಗೆಗೆ ಈ ವಿಷಯಗಳು ಒಂದೋ ನಿರ್ಲಕ್ಷ್ಯಕ್ಕೆ ಒಳಗಾಗುತ್ತವೆ ಅಥವಾ ಮುಂದೂಡಲ್ಪಟ್ಟಿರುತ್ತವೆ. ಇದನ್ನೆಲ್ಲ ಸೂಕ್ಷ್ಮವಾಗಿ ನೋಡಿದಾಗ ಮಾತ್ರ ಮುಂದೆ ಬರಬಹುದಾಗಿರುವ ನೆರೆಯ ಅಂದಾಜು ಸಿಗುತ್ತದೆ. ಒಂದು ಕರ್ಬ್ ಸ್ಟೋನ್ ಮತ್ತು ಕಬ್ಬಿಣದ ಜಾಲಿ ಬ್ಲಾಕ್ ಆದರೆ ಏನಾಗುತ್ತೆ ಎನ್ನುವ ಕ್ಯಾರ್ ಲೇಸ್ ಮೊನ್ನೆಯ ಮಂಗಳವಾರವನ್ನು ಭವಿಷ್ಯದಲ್ಲಿ ಮತ್ತೆ ನೆನಪಿಸಲಿದೆ. ಇನ್ನು ಮೂರ್ನಾಕು ತಿಂಗಳು ವರುಣನ ಸೀಸನ್, ನಮ್ಮ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಇರುವ ಸವಾಲು ಚಿಕ್ಕದ್ದಲ್ಲ!

  • Share On Facebook
  • Tweet It


- Advertisement -
Floodmangaluru


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಹಿಂದೆ ಕಾಂಗ್ರೆಸ್ ಮಾಡಿದ್ದ ತಪ್ಪುಗಳನ್ನು ಪರಿಹರಿಸಲು ಖಾದರ್ ಮನಸ್ಸು ಮಾಡ್ತಾರಾ?
August 9, 2018
ಮಂಗಳೂರಿನ ಟ್ರಾಫಿಕ್ ಜಾಮ್ ಗೆ ಹೆಚ್ಚಿನ ಪೊಲೀಸ್ ಕಾನ್ ಸ್ಟೇಬಲ್ ಗಳು ಉತ್ತರ ಕರ್ನಾಟಕದವರಾಗಿರುವುದೇ ಕಾರಣ!
November 7, 2017
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search