• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಮಂಗಳೂರು ವೈಜ್ಞಾನಿಕವಾಗಿ ಬೆಳೆಯಲು ನಮ್ಮ ಪಾಲಿಕೆ ಸದಸ್ಯರಿಗೆ ಮನಸ್ಸಿಲ್ಲ!!

Hanumantha Kamath Posted On August 15, 2018
0


0
Shares
  • Share On Facebook
  • Tweet It

ನಮ್ಮ ದೇಶವನ್ನು ಪ್ರೀತಿಸುವ ಪ್ರತಿಯೊಬ್ಬ ಭಾರತದ ನಿವಾಸಿಗೂ 72 ನೇ ವರ್ಷದ ಸ್ವಾತಂತ್ರ್ಯೋತ್ಸವದ ಶುಭಾಶಯಗಳು. ನೀವು ಪ್ರತಿ ವರ್ಷ ಒಂದು ಸಂಗತಿಯನ್ನು ಗಮನಿಸುತ್ತಾ ಇರಬಹುದು. ಅದೇನೆಂದರೆ ನಮ್ಮ ಮಂಗಳೂರು ಸಿಕ್ಕಾಪಟ್ಟೆ ಬೆಳೆಯುತ್ತಿದೆ. ಆದರೆ ಪ್ರತಿ ವರ್ಷ ಅವೈಜ್ಞಾನಿಕವಾಗಿ ನಗರ ತನ್ನ ಬಾಹುಗಳನ್ನು ಹರಡುತ್ತಿದೆ. ಮಂಗಳೂರಿನಲ್ಲಿ ಪ್ರತಿ ವರ್ಷ ಅಕ್ರಮವಾಗಿ ಕಟ್ಟಡಗಳು ಏದ್ದೇಳುತ್ತಿದೆ. ಇಷ್ಟು ಧೈರ್ಯವಾಗಿ ಹೇಗೆ ಬಿಲ್ಡರ್ ಗಳು ಕಟ್ಟಡಗಳನ್ನು ಅಕ್ರಮವಾಗಿ ಕಟ್ಟುತ್ತಿದ್ದಾರೆ ಎಂದು ನೀವು ಕೇಳಬಹುದು. ಇವರಿಗೆ ಹೇಳುವವರು ಕೇಳುವವರು ಯಾರೂ ಇಲ್ವಾ ಎಂದು ನಿಮಗೆ ಅನಿಸಬಹುದು. ಬಿಲ್ಡರ್ ಗಳ ಭಂಡ ಧೈರ್ಯಕ್ಕೆ ಕಾರಣ ನಮ್ಮ ಸರಕಾರದ ನಿಯಮಗಳು.

ನಿಯಮವನ್ನು ದುರುಪಯೋಗ ಮಾಡಲಾಗುತ್ತದೆ….

ಕರ್ನಾಟಕ ಮುನ್ಸಿಪಲ್ ಕಾರ್ಪೋರೇಶನ್ ಆಕ್ಟ್ 1976, ರೂಲ್ 112-Cಪ್ರಕಾರ ಲೈಸೆನ್ಸ್ ಇಲ್ಲದೆ ಮನೆ ಕಟ್ಟಿದರೂ ಕೂಡ ಡೋರ್ ನಂಬ್ರ ಸಿಗುತ್ತದೆ. ಇದರ ದುರ್ಲಾಭವನ್ನು ಬಿಲ್ಡರ್ ಗಳು ಹೇರಳವಾಗಿ ಉಪಯೋಗಿಸುತ್ತಿದ್ದಾರೆ. ಲೈಸೆನ್ಸ್ ಎಷ್ಟು ಮನೆಗಳಿಗೆ ಪಡೆದುಕೊಂಡಿದ್ದರೋ ಅದಕ್ಕಿಂತ ಹೆಚ್ಚು ಮನೆಗಳನ್ನು ಕಟ್ಟುತ್ತಾರೆ. ಕಂಪ್ಲಿಶನ್ ಸರ್ಟಿಫಿಕೇಟ್ ಇಲ್ಲದೆ ಡೋರ್ ನಂಬ್ರಗಳನ್ನು ಪಡೆದುಕೊಳ್ಳುತ್ತಾರೆ. ಕೆಲವರು ಏನು ಮಾಡುತ್ತಾರೆ ಎಂದರೆ ನಿಯಮ ಪ್ರಕಾರ ಎಷ್ಟು ಮನೆಗಳನ್ನು ಕಟ್ಟಲು ಅನುಮತಿ ಪಡೆದುಕೊಂಡಿರುತ್ತಾರೋ ಅಷ್ಟೇ ಕಟ್ಟಿದರೆ ರೋಡಿಗೆ ಜಾಗ ಬಿಟ್ಟುಕೊಡುವುದರಿಂದ ಹಿಡಿದು ಸೆಟ್ ಬ್ಯಾಕ್ ಗೆ ಜಾಗ ಮೀಸಲಾಗಿ ಇಡುವ ತನಕ ತುಂಬಾ ಕಿರಿಕಿರಿ ಇದೆ ಎಂದು ಹೇಳಿ ವಸತಿ ಸಮುಚ್ಚಯದಲ್ಲಿರುವ ಎಷ್ಟು ಮನೆಗಳನ್ನು ಕಟ್ಟಬೇಕು ಎಂದು ಪ್ಲಾನ್ ಮಾಡಿದ್ದಾರೋ ಅಷ್ಟು ಮನೆಗಳಿಗೆ ಲೈಸೆನ್ಸ್ ಪಡೆದುಕೊಳ್ಳಲು ಹೋಗುವುದಿಲ್ಲ. ಇದರಿಂದ ಏನಾಗುತ್ತದೆ ಎಂದರೆ ಎಲ್ಲರೂ ಹೀಗೆ ಮಾಡುವುದರಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಹಿಡಿದು ಪಾರ್ಕಿಂಗ್ ಸಮಸ್ಯೆಗಳ ತನಕ ಎಲ್ಲವೂ ಬೃಹದಾಕಾರವಾಗಿ ಬೆಳೆಯುತ್ತದೆ. ಇದನ್ನು ನಿಲ್ಲಿಸಲು ಇತ್ತೀಚೆಗೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರು ಬಹಳ ಒಳ್ಳೆಯ ಪರಿಹಾರವನ್ನು ಕಂಡುಹಿಡಿದಿದ್ದರು.

ಆಯುಕ್ತರ ನಡೆ ಮೆಚ್ಚುವಂತದ್ದು..

ಪಾಲಿಕೆ ಆಯುಕ್ತರು ಏನು ಮಾಡಿದ್ದರು ಎಂದರೆ “ಲೈಸೆನ್ಸ್ ಇಲ್ಲದೆ ಕಟ್ಟಿದ ಮನೆಗಳಿಗೆ ಡೋರ್ ನಂಬ್ರ ಕೊಡದೇ ಇರುವುದು”. ಇದೊಂದು ಉತ್ತಮ ನಡೆ. ಇದರಿಂದ ಲೈಸೆನ್ಸ್ ಇಲ್ಲದೆ ಮನೆಕಟ್ಟುವುದು, ಲೆಸೆನ್ಸ್ ಗಿಂತ ಹೆಚ್ಚು ಮನೆ ಕಟ್ಟುವುದು ಎಲ್ಲವೂ ನಿಲ್ಲುತ್ತದೆ. ಆದರೆ ಪಾಲಿಕೆಯ ಆಯುಕ್ತರ ಈ ನಡೆ ನಮ್ಮ ಪಾಲಿಕೆಯ ಸದಸ್ಯರ ಹೊಟ್ಟೆಗೆ ಕಲ್ಲು ಹಾಕಿದಂತೆ ಆಗಿದೆ. ಪಾಲಿಕೆಯ ಪರಿಷತ್ ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ ಎನ್ನದೇ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಇದನ್ನು ಖಂಡಾತುಂಡವಾಗಿ ವಿರೋಧಿಸಿದ್ದಾರೆ. ಆಯುಕ್ತರ ಒಳ್ಳೆಯ ನಡೆಯನ್ನು ವಿರೋಧಿಸುವವರು ಇದಕ್ಕೆ ಕೊಡುವ ಕಾರಣವೇನೆಂದರೆ ” ಹೀಗೆ ಮಾಡುವುದರಿಂದ ಬಡವನಿಗೆ ಮನೆ ಕಟ್ಟಲು ಕಷ್ಟವಾಗುತ್ತದೆ. ಅದಕ್ಕಾಗಿ ಇದನ್ನು ಜಾರಿಗೆ ತರಬಾರದು” ಪಾಲಿಕೆ ಸದಸ್ಯರು ಏನು ಹೇಳುವುದೇಂದರೆ ಒಂದು ಸಾವಿರ ಚದರ ಅಡಿಯ ತನಕ ಕಟ್ಟಿರುವ ಮನೆಗಳಿಗೆ ಲೈಸೆನ್ಸ್ ಇಲ್ಲವೆಂದು ಡೋರ್ ನಂಬ್ರ ಕೊಡದೇ ಇರಬಾರದು ಎಂದು ಹೇಳುತ್ತಾರೆ. ಈಗ ಇರುವ ಪ್ರಶ್ನೆ ಏನೆಂದರೆ ಬಡವನೊಬ್ಬ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಸಾವಿರ ಚದರ ಅಡಿಯ ಮನೆ ಕಟ್ಟಲು ಸಾಧ್ಯವೇ? ಒಂದು ವೇಳೆ ಕಟ್ಟಿದರೆ ಅವನನ್ನು ಬಡವ ಎನ್ನಲು ಆಗುತ್ತದಾ? ಬಿಲ್ಡರ್ ಗಳ ಪರ ಪಾಲಿಕೆ ಒಳಗೆ ಇರುವ ಬ್ರೋಕರ್ ಗಳಂತೆ ಮನಪಾ ಸದಸ್ಯರು ವರ್ತಿಸಲೇಬಾರದು. ನಗರದ ಸಮಸ್ಯೆಯನ್ನು ಪರಿಹರಿಸಲು ಯೋಚಿಸಬೇಕೆ ವಿನ: ಬಿಲ್ಡರ್ ಗಳು ಕೊಡುವ “ಪ್ರೀತಿ”ಗೆ ಮನಸೋತು ನಗರದ ಪಾರ್ಕಿಂಗ್, ಟ್ರಾಫಿಕ್ ಸಮಸ್ಯೆ ಜಾಸ್ತಿಯಾಗುವಂತೆ ಮಾಡಬಾರದು. ಒಂದು ಸಾವಿರ ಚದರ ಅಡಿ ಎಂದು ಇವರು ಮಾಪನ ಹಿಡಿಯುವಾಗಲೇ ಇವರು ಬಡವರ ಪರ ಅಲ್ಲ, ಬಿಲ್ಡರ್ ಪರ ಎನ್ನುವುದು ಗ್ಯಾರಂಟಿಯಾಗುತ್ತದೆ. ನಾನು ಪಾಲಿಕೆ ಕಮೀಷನರ್, ಮೇಯರ್ ಬಳಿ ಕೇಳುವುದೆನೆಂದರೆ ಯಾವ ಒತ್ತಡಕ್ಕೂ ತಾವು ಬಲಿಯಾಗದೇ ಧೈರ್ಯವಾಗಿ ನಿಯಮವನ್ನು ಜಾರಿಗೆ ತನ್ನಿ. ಒಂದು ವೇಳೆ ನೀವು ಒತ್ತಡಕ್ಕೆ ಮಣಿದರೆ ನೀವು ಕೂಡ ಬಿಲ್ಡರ್ ಪರ ಎಂದು ಗ್ಯಾರಂಟಿಯಾಗುತ್ತದೆ!

0
Shares
  • Share On Facebook
  • Tweet It


Mangaluru City Corporation


Trending Now
ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
Hanumantha Kamath February 19, 2026
ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
Hanumantha Kamath February 18, 2026
You may also like
ಪುರಭವನ ಖಾಸಗಿ ಮದುವೆ ಹಾಲ್ ನಂತೆ ಅಲ್ಲ!
September 23, 2017
ಬಯಲು ಶೌಚ ಮುಕ್ತ ನಗರ ಪ್ರಶಸ್ತಿ ಪಡೆದುಕೊಳ್ಳುವಾಗ ಮೇಯರ್ ಅವರಿಗೆ ಮೀನಿನ ದಕ್ಕೆ ನೆನಪಾಗಲಿಲ್ಲವಾ!
September 11, 2017
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
  • Popular Posts

    • 1
      ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • 2
      ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!

  • Privacy Policy
  • Contact
© Tulunadu Infomedia.

Press enter/return to begin your search