• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಜೆನೆರಿಕ್ ಔಷಧಾಲಯಗಳನ್ನು ತೆರೆಯಲು ಕೇಂದ್ರ, ರಾಜ್ಯ ಮುಂದಾಗಲಿ!

Hanumantha Kamath Posted On September 9, 2017
0


0
Shares
  • Share On Facebook
  • Tweet It

ನರೇಂದ್ರ ಮೋದಿಯವರಿಂದ ಪಾಪದವರ ಎರಡು ಪ್ರಮುಖ ಟೆನ್ಷನ್ ಕಡಿಮೆಯಾಗಿದೆ. ಒಂದು ಮಂಡಿಚಿಪ್ಪು ಶಸ್ತ್ರಚಿಕಿತ್ಸೆ, ಇನ್ನೊಂದು ಹಾರ್ಟ್ ಆಪರೇಶನ್ ನಲ್ಲಿ ಸ್ಟ್ರೆಂಥ್ಸ್ ಅಳವಡಿಸುವುದು. ಎರಡಕ್ಕೂ ಎಷ್ಟು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಹಿಂದಿನ ಸಂಚಿಕೆಯಲ್ಲಿ ವಿವರಿಸಿದ್ದೇನೆ. ಇನ್ನು ಆಗಬೇಕಾಗಿರುವುದು ಕಣ್ಣಿನ ಕ್ಯಾಟರೆಕ್ಟ್ ಶಸ್ತ್ರಚಿಕಿತ್ಸೆ ನಡೆಸುವಾಗ ಅಳವಡಿಸುವ ಇನ್ಟ್ರಾಕ್ಯೂಲರ್ ಲೆನ್ಸ್ ನ ಬೆಲೆಯನ್ನು ಹೀಗೆ ಗಣನೀಯ ಪ್ರಮಾಣದಲ್ಲಿ ಇಳಿಸುವುದು. ಇನ್ನು ಹೃದಯದಲ್ಲಿ ವಾಲ್ (ಕವಾಟ)ವನ್ನು ಅಳವಡಿಸುವ ಶಸ್ತ್ರಚಿಕಿತ್ಸೆಯನ್ನು ಕೂಡ ಕಡಿಮೆ ದರದಲ್ಲಿ ಮಾಡುವ ಪ್ರಕ್ರಿಯೆ. ಈ ಎರಡರ ಬಗ್ಗೆನೂ ಕೇಂದ್ರ ಯೋಚಿಸುತ್ತಿದೆ. ಅದು ಕೂಡ ಆದಷ್ಟು ಬೇಗ ಜಾರಿಯಾಗಲಿದೆ. ನಾನು ನಿನ್ನೆ ಹೇಳಿದ ಎರಡು ಬೃಹತ್ ಶಸ್ತ್ರಚಿಕಿತ್ಸೆ ಮತ್ತು ಇವತ್ತು ಹೇಳಿರುವ ಎರಡು ಶಸ್ತ್ರಚಿಕಿತ್ಸೆಗೆ ಬೆಲೆ ಕಡಿಮೆಯಾಗುವುದರಿಂದ ಸಾಮಾನ್ಯ ಜನರ ಪಾಲಿಗೆ ಇದು ನಿಜಕ್ಕೂ ತುಂಬಾ ಸಮಾಧಾನದ ಸಂಗತಿಯಾಗಲಿದೆ.
ಇನ್ನು ನೀವು ಜೆನೆರಿಕ್ ಔಷಧಿಯ ಬಗ್ಗೆ ಕೇಳಿರಬಹುದು. ಬಡ ಮತ್ತು ಮಧ್ಯಮ ವರ್ಗದ ರೋಗಿಗಳ ಪಾಲಿಗೆ ಕೇಂದ್ರ ಸರಕಾರ ಜೆನೆರಿಕ್ ಔಷಧಗಳನ್ನು ಜಾರಿಗೆ ತರುವ ಮೂಲಕ ಅವರಿಗೆ ಔಷಧಿಗಳ ಹೊರೆಯನ್ನು ಕಡಿಮೆ ಮಾಡಿದೆ.

ಅಷ್ಟಕ್ಕೂ ಜೆನೆರಿಕ್ ಔಷಧಿಗಳು ಎಂದರೇನು ಎಂದು ಗೊತ್ತಿಲ್ಲದವರಿಗೆ ಒಂದೇ ವಾಕ್ಯದಲ್ಲಿ ಹೇಳಬಯಸುತ್ತೇನೆ. ಬೇರೆ ಬ್ರಾಂಡ್ ಹೊಂದಿರುವ ಔಷಧಗಳ ಗುಣಮಟ್ಟದಷ್ಟೇ ಇರುವ, ಅಷ್ಟೇ ಪ್ರಭಾವಶಾಲಿಯಾಗಿರುವ, ಹೆಸರು, ಆಕಾರ, ಬಣ್ಣದಲ್ಲಿ ವ್ಯತ್ಯಾಸ ಇದ್ದರೂ ಕಾಯಿಲೆಗಳನ್ನು ಗುಣಪಡಿಸುವ ನಿಟ್ಟಿನಲ್ಲಿ ಬ್ರಾಂಡ್ ಔಷಧಿಗಳಿಗೆ ಒಂದು ತೂಕ ಹೆಚ್ಚೆ ಸ್ಪರ್ಧೆ ಕೊಡಬಲ್ಲ ಆದರೆ ಬ್ರಾಂಡ್ ನೇಮ್ ಇಲ್ಲದ, ಜಾಹೀರಾತು ಹೊಂದಿಲ್ಲದ ಔಷಧಿಗಳೇ ಜೆನರಿಕ್ ಔಷಧಿಗಳು ಎನ್ನುತ್ತಾರೆ. ಆದರೆ ನನ್ನದೊಂದು ಸಲಹೆಯನ್ನು ನಾನು ಕೇಂದ್ರ ಸರಕಾರಕ್ಕೆ ಕೊಡಲು ಇಷ್ಟಪಡುತ್ತೇನೆ.

ದೇನೆಂದರೆ ನೀವು ಜೆನೆರಿಕ್ ಔಷಧಿಗಳನ್ನು ಕೊಳ್ಳಲು ಬಡರೋಗಿಗಳಿಗೆ ಕರೆ ಕೊಡುತ್ತಿದ್ದಿರಿ ನಿಜ, ಆದರೆ ಜೆನರಿಕ್ ಔಷಧಿಗಳನ್ನು ಮಾರಲು ಅಂಗಡಿಗಳು ಸಾಕಷ್ಟು ಬೇಕು. ಆದರೆ ಅಂಗಡಿಗಳನ್ನು ತೆರೆಯಬೇಕಾದರೆ ಅದಕ್ಕೆ ಬಂಡವಾಳ ಬೇಕು. ಆದರೆ ಜೆನೆರಿಕ್ ಔಷಧಿಗಳಲ್ಲಿ ಲಾಭದ ಮಾರ್ಜಿನ್ ಕಡಿಮೆ. ಕಡಿಮೆ ಲಾಭಕ್ಕೆ ಮಾರಿ ಅಂಗಡಿ ಬಾಡಿಗೆ ಕೊಟ್ಟು ಪೂರೈಸುವುದು ಕಷ್ಟ. ಅದಕ್ಕಾಗಿ ಕೇಂದ್ರ ಸರಕಾರ ಜೆನೆರಿಕ್ ಔಷಧಾಲಯಗಳನ್ನು ಸರಕಾರಿ ಆಸ್ಪತ್ರೆಯ ಆವರಣದಲ್ಲಿ ತೆರೆಯಬೇಕು. ಪಾಪದವರು ಅಲ್ಲಿಗೆ ಬರುವುದರಿಂದ ಅಲ್ಲಿಯೇ ಔಷಧ ಅವರಿಗೆ ಸಿಗುತ್ತದೆ. ಬೇರೆ ಕಡೆ ಅಂತಹ ಮೆಡಿಕಲ್ ಗಳನ್ನು ತೆರೆದರೆ ಶ್ರೀಮಂತರು ಕೂಡ ಖರೀದಿಸಿ ನಂತರ ಅರ್ಹರಿಗೆ ಕೊರತೆಯಾಗಬಹುದು. ಉದಾಹರಣೆಗೆ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹಾಲಿನ ಬೂತ್ ಒಂದಕ್ಕೆ ಅವಕಾಶ ಕೊಟ್ಟಂತೆ ಜೆನೆರಿಕ್ ಶಾಪ್ ತೆರೆಯಿರಿ. ಹಾಗೆ ವೆನ್ ಲಾಕ್ ಆಸ್ಪತ್ರೆಯಲ್ಲಿ ಕ್ಯಾಂಟಿನ್ ಗೆ ಜಾಗ ಮಾಡಿಕೊಟ್ಟಂತೆ ಅಲ್ಲಿಯೂ ಜೆನೆರಿಕ್ ಅಂಗಡಿಗಳು ಒಪನ್ ಆಗಲಿ.

ಅಷ್ಟಕ್ಕೂ ಒಂದು ವಿಷಯ ಹೇಳಬಯಸುತ್ತೇನೆ. ಯಾವಾಗಲೂ ಪ್ರತಿಭಟನೆಗಳು ಆಗಬೇಕಾಗಿರುವುದು ಇಂತಹ ವಿಷಯದಲ್ಲಿ. ಕಮ್ಯೂನಿಸ್ಟರು ಕೆಲವೊಮ್ಮೆ ಅಲ್ಲಲ್ಲಿ ಬೀಡಿ ಕಾರ್ಮಿಕರ, ಕಟ್ಟಡ ಕಾರ್ಮಿಕರ ಪರ ಪ್ರತಿಭಟನೆ ಮಾಡುತ್ತಾರೆ. ಆದರೆ ಅವರಿಗೆ ಜನಬಲ ಕಡಿಮೆ ಇರುವುದರಿಂದ ಮತ್ತು ಯಾವತ್ತೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲವಾಗಿರುವುದರಿಂದ ಅವರ ಬೇಡಿಕೆ ಅನುಷ್ಟಾನಕ್ಕೆ ಬರುವುದು ಕಡಿಮೆ. ಅದಕ್ಕಾಗಿ ಜನರ ಪರ ಹೋರಾಟದಲ್ಲಿ ಬಿಜೆಪಿ, ಕಾಂಗ್ರೆಸ್ ಮುಂದಕ್ಕೆ ಬರಬೇಕು. ಜೆನೆರಿಕ್ ಮಳಿಗೆಗಳನ್ನು ಹೆಚ್ಚೆಚ್ಚು ತೆರೆಯಲು ಕೇಂದ್ರದ ಮೇಲೆ ಕಾಂಗ್ರೆಸ್ ಒತ್ತಡ ತರಲಿ. ಹಾಗೆ ಅದಕ್ಕೆ ಜಾಗ, ಮೂಲಭೂತ ಸೌಲಭ್ಯ ಕೊಡಿಸಲು ಬಿಜೆಪಿ ರಾಜ್ಯದ ಮೇಲೆ ಒತ್ತಡ ತರಲಿ. ಒಟ್ಟಿನಲ್ಲಿ ಅಭಿವೃದ್ಧಿ ನಮ್ಮ ಕರಾವಳಿಗೆ, ರಾಜ್ಯಕ್ಕೆ ಸಿಗಲಿ. ಹೇಗೂ ಮಂಗಳೂರು ಚಲೋ ಮುಗಿದಿದೆ. ನವಕರ್ನಾಟಕದ ಚಿಂತನೆ ನಡೆಯಲಿ ಎಂದು ಹೇಳುತ್ತಾ ವಾರವನ್ನು ಮುಗಿಸುತ್ತಿದ್ದೇನೆ. ಮುಂದಿನ ವಾರ ಹೊಸ ವಿಚಾರ, ಹೊಸ ಕಲ್ಪನೆಗಳೊಂದಿಗೆ ಸಿಗೋಣ!

ಹನುಮಂತ ಕಾಮತ್, ಸಾಮಾಜಿಕ ಹೋರಾಟಗಾರ

0
Shares
  • Share On Facebook
  • Tweet It


hanumantha Kamathjenericmodi


Trending Now
ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
Hanumantha Kamath July 30, 2025
ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
Hanumantha Kamath July 29, 2025
You may also like
ಬ್ಯಾಂಕಿನವರನ್ನು ಇಲ್ಲಿ ತನಕ ತಲೆ ಮೇಲೆ ಹೊತ್ತುಕೊಂಡದ್ದೇ ತಪ್ಪು!
December 21, 2018
ಹಿಂದೆ ಕಾಂಗ್ರೆಸ್ ಮಾಡಿದ್ದ ತಪ್ಪುಗಳನ್ನು ಪರಿಹರಿಸಲು ಖಾದರ್ ಮನಸ್ಸು ಮಾಡ್ತಾರಾ?
August 9, 2018
ಉನ್ನತ ಶಿಕ್ಷಣದ ಉತ್ತೇಜನಕ್ಕೆ ಕೇಂದ್ರ ಸರ್ಕಾರದ ಭರ್ಜರಿ ಕೊಡುಗೆ, 1 ಲಕ್ಷ ಕೋಟಿ ಅನುದಾನ ಬಿಡುಗಡೆ
June 19, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ
    • 6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..
    • ಶಿವದೂತ ಗುಳಿಗೆ ನಾಟಕದ "ಭೀಮರಾವ್" ರಮೇಶ್ ಕಲ್ಲಡ್ಕ ನಿಧನ!
    • ನೂರಾರು ಜನರಿಗೆ ಸಾಲಕೊಡಿಸುವ ನೆಪದಲ್ಲಿ ವಂಚನೆ: ರೋಶನ್ ಸಲ್ದಾನಾ ಪ್ರಕರಣ ಸಿಐಡಿಗೆ
    • ಕರ್ನಾಟಕದಲ್ಲಿ "ಮನೆಮನೆಗೆ ಪೊಲೀಸ್" ಏನು ಕಥೆ!
  • Popular Posts

    • 1
      ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • 2
      ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • 3
      ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • 4
      SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • 5
      ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!

  • Privacy Policy
  • Contact
© Tulunadu Infomedia.

Press enter/return to begin your search