• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಜೆನೆರಿಕ್ ಔಷಧಾಲಯಗಳನ್ನು ತೆರೆಯಲು ಕೇಂದ್ರ, ರಾಜ್ಯ ಮುಂದಾಗಲಿ!

Hanumantha Kamath Posted On September 9, 2017
0


0
Shares
  • Share On Facebook
  • Tweet It

ನರೇಂದ್ರ ಮೋದಿಯವರಿಂದ ಪಾಪದವರ ಎರಡು ಪ್ರಮುಖ ಟೆನ್ಷನ್ ಕಡಿಮೆಯಾಗಿದೆ. ಒಂದು ಮಂಡಿಚಿಪ್ಪು ಶಸ್ತ್ರಚಿಕಿತ್ಸೆ, ಇನ್ನೊಂದು ಹಾರ್ಟ್ ಆಪರೇಶನ್ ನಲ್ಲಿ ಸ್ಟ್ರೆಂಥ್ಸ್ ಅಳವಡಿಸುವುದು. ಎರಡಕ್ಕೂ ಎಷ್ಟು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಹಿಂದಿನ ಸಂಚಿಕೆಯಲ್ಲಿ ವಿವರಿಸಿದ್ದೇನೆ. ಇನ್ನು ಆಗಬೇಕಾಗಿರುವುದು ಕಣ್ಣಿನ ಕ್ಯಾಟರೆಕ್ಟ್ ಶಸ್ತ್ರಚಿಕಿತ್ಸೆ ನಡೆಸುವಾಗ ಅಳವಡಿಸುವ ಇನ್ಟ್ರಾಕ್ಯೂಲರ್ ಲೆನ್ಸ್ ನ ಬೆಲೆಯನ್ನು ಹೀಗೆ ಗಣನೀಯ ಪ್ರಮಾಣದಲ್ಲಿ ಇಳಿಸುವುದು. ಇನ್ನು ಹೃದಯದಲ್ಲಿ ವಾಲ್ (ಕವಾಟ)ವನ್ನು ಅಳವಡಿಸುವ ಶಸ್ತ್ರಚಿಕಿತ್ಸೆಯನ್ನು ಕೂಡ ಕಡಿಮೆ ದರದಲ್ಲಿ ಮಾಡುವ ಪ್ರಕ್ರಿಯೆ. ಈ ಎರಡರ ಬಗ್ಗೆನೂ ಕೇಂದ್ರ ಯೋಚಿಸುತ್ತಿದೆ. ಅದು ಕೂಡ ಆದಷ್ಟು ಬೇಗ ಜಾರಿಯಾಗಲಿದೆ. ನಾನು ನಿನ್ನೆ ಹೇಳಿದ ಎರಡು ಬೃಹತ್ ಶಸ್ತ್ರಚಿಕಿತ್ಸೆ ಮತ್ತು ಇವತ್ತು ಹೇಳಿರುವ ಎರಡು ಶಸ್ತ್ರಚಿಕಿತ್ಸೆಗೆ ಬೆಲೆ ಕಡಿಮೆಯಾಗುವುದರಿಂದ ಸಾಮಾನ್ಯ ಜನರ ಪಾಲಿಗೆ ಇದು ನಿಜಕ್ಕೂ ತುಂಬಾ ಸಮಾಧಾನದ ಸಂಗತಿಯಾಗಲಿದೆ.
ಇನ್ನು ನೀವು ಜೆನೆರಿಕ್ ಔಷಧಿಯ ಬಗ್ಗೆ ಕೇಳಿರಬಹುದು. ಬಡ ಮತ್ತು ಮಧ್ಯಮ ವರ್ಗದ ರೋಗಿಗಳ ಪಾಲಿಗೆ ಕೇಂದ್ರ ಸರಕಾರ ಜೆನೆರಿಕ್ ಔಷಧಗಳನ್ನು ಜಾರಿಗೆ ತರುವ ಮೂಲಕ ಅವರಿಗೆ ಔಷಧಿಗಳ ಹೊರೆಯನ್ನು ಕಡಿಮೆ ಮಾಡಿದೆ.

ಅಷ್ಟಕ್ಕೂ ಜೆನೆರಿಕ್ ಔಷಧಿಗಳು ಎಂದರೇನು ಎಂದು ಗೊತ್ತಿಲ್ಲದವರಿಗೆ ಒಂದೇ ವಾಕ್ಯದಲ್ಲಿ ಹೇಳಬಯಸುತ್ತೇನೆ. ಬೇರೆ ಬ್ರಾಂಡ್ ಹೊಂದಿರುವ ಔಷಧಗಳ ಗುಣಮಟ್ಟದಷ್ಟೇ ಇರುವ, ಅಷ್ಟೇ ಪ್ರಭಾವಶಾಲಿಯಾಗಿರುವ, ಹೆಸರು, ಆಕಾರ, ಬಣ್ಣದಲ್ಲಿ ವ್ಯತ್ಯಾಸ ಇದ್ದರೂ ಕಾಯಿಲೆಗಳನ್ನು ಗುಣಪಡಿಸುವ ನಿಟ್ಟಿನಲ್ಲಿ ಬ್ರಾಂಡ್ ಔಷಧಿಗಳಿಗೆ ಒಂದು ತೂಕ ಹೆಚ್ಚೆ ಸ್ಪರ್ಧೆ ಕೊಡಬಲ್ಲ ಆದರೆ ಬ್ರಾಂಡ್ ನೇಮ್ ಇಲ್ಲದ, ಜಾಹೀರಾತು ಹೊಂದಿಲ್ಲದ ಔಷಧಿಗಳೇ ಜೆನರಿಕ್ ಔಷಧಿಗಳು ಎನ್ನುತ್ತಾರೆ. ಆದರೆ ನನ್ನದೊಂದು ಸಲಹೆಯನ್ನು ನಾನು ಕೇಂದ್ರ ಸರಕಾರಕ್ಕೆ ಕೊಡಲು ಇಷ್ಟಪಡುತ್ತೇನೆ.

ದೇನೆಂದರೆ ನೀವು ಜೆನೆರಿಕ್ ಔಷಧಿಗಳನ್ನು ಕೊಳ್ಳಲು ಬಡರೋಗಿಗಳಿಗೆ ಕರೆ ಕೊಡುತ್ತಿದ್ದಿರಿ ನಿಜ, ಆದರೆ ಜೆನರಿಕ್ ಔಷಧಿಗಳನ್ನು ಮಾರಲು ಅಂಗಡಿಗಳು ಸಾಕಷ್ಟು ಬೇಕು. ಆದರೆ ಅಂಗಡಿಗಳನ್ನು ತೆರೆಯಬೇಕಾದರೆ ಅದಕ್ಕೆ ಬಂಡವಾಳ ಬೇಕು. ಆದರೆ ಜೆನೆರಿಕ್ ಔಷಧಿಗಳಲ್ಲಿ ಲಾಭದ ಮಾರ್ಜಿನ್ ಕಡಿಮೆ. ಕಡಿಮೆ ಲಾಭಕ್ಕೆ ಮಾರಿ ಅಂಗಡಿ ಬಾಡಿಗೆ ಕೊಟ್ಟು ಪೂರೈಸುವುದು ಕಷ್ಟ. ಅದಕ್ಕಾಗಿ ಕೇಂದ್ರ ಸರಕಾರ ಜೆನೆರಿಕ್ ಔಷಧಾಲಯಗಳನ್ನು ಸರಕಾರಿ ಆಸ್ಪತ್ರೆಯ ಆವರಣದಲ್ಲಿ ತೆರೆಯಬೇಕು. ಪಾಪದವರು ಅಲ್ಲಿಗೆ ಬರುವುದರಿಂದ ಅಲ್ಲಿಯೇ ಔಷಧ ಅವರಿಗೆ ಸಿಗುತ್ತದೆ. ಬೇರೆ ಕಡೆ ಅಂತಹ ಮೆಡಿಕಲ್ ಗಳನ್ನು ತೆರೆದರೆ ಶ್ರೀಮಂತರು ಕೂಡ ಖರೀದಿಸಿ ನಂತರ ಅರ್ಹರಿಗೆ ಕೊರತೆಯಾಗಬಹುದು. ಉದಾಹರಣೆಗೆ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಹಾಲಿನ ಬೂತ್ ಒಂದಕ್ಕೆ ಅವಕಾಶ ಕೊಟ್ಟಂತೆ ಜೆನೆರಿಕ್ ಶಾಪ್ ತೆರೆಯಿರಿ. ಹಾಗೆ ವೆನ್ ಲಾಕ್ ಆಸ್ಪತ್ರೆಯಲ್ಲಿ ಕ್ಯಾಂಟಿನ್ ಗೆ ಜಾಗ ಮಾಡಿಕೊಟ್ಟಂತೆ ಅಲ್ಲಿಯೂ ಜೆನೆರಿಕ್ ಅಂಗಡಿಗಳು ಒಪನ್ ಆಗಲಿ.

ಅಷ್ಟಕ್ಕೂ ಒಂದು ವಿಷಯ ಹೇಳಬಯಸುತ್ತೇನೆ. ಯಾವಾಗಲೂ ಪ್ರತಿಭಟನೆಗಳು ಆಗಬೇಕಾಗಿರುವುದು ಇಂತಹ ವಿಷಯದಲ್ಲಿ. ಕಮ್ಯೂನಿಸ್ಟರು ಕೆಲವೊಮ್ಮೆ ಅಲ್ಲಲ್ಲಿ ಬೀಡಿ ಕಾರ್ಮಿಕರ, ಕಟ್ಟಡ ಕಾರ್ಮಿಕರ ಪರ ಪ್ರತಿಭಟನೆ ಮಾಡುತ್ತಾರೆ. ಆದರೆ ಅವರಿಗೆ ಜನಬಲ ಕಡಿಮೆ ಇರುವುದರಿಂದ ಮತ್ತು ಯಾವತ್ತೂ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲವಾಗಿರುವುದರಿಂದ ಅವರ ಬೇಡಿಕೆ ಅನುಷ್ಟಾನಕ್ಕೆ ಬರುವುದು ಕಡಿಮೆ. ಅದಕ್ಕಾಗಿ ಜನರ ಪರ ಹೋರಾಟದಲ್ಲಿ ಬಿಜೆಪಿ, ಕಾಂಗ್ರೆಸ್ ಮುಂದಕ್ಕೆ ಬರಬೇಕು. ಜೆನೆರಿಕ್ ಮಳಿಗೆಗಳನ್ನು ಹೆಚ್ಚೆಚ್ಚು ತೆರೆಯಲು ಕೇಂದ್ರದ ಮೇಲೆ ಕಾಂಗ್ರೆಸ್ ಒತ್ತಡ ತರಲಿ. ಹಾಗೆ ಅದಕ್ಕೆ ಜಾಗ, ಮೂಲಭೂತ ಸೌಲಭ್ಯ ಕೊಡಿಸಲು ಬಿಜೆಪಿ ರಾಜ್ಯದ ಮೇಲೆ ಒತ್ತಡ ತರಲಿ. ಒಟ್ಟಿನಲ್ಲಿ ಅಭಿವೃದ್ಧಿ ನಮ್ಮ ಕರಾವಳಿಗೆ, ರಾಜ್ಯಕ್ಕೆ ಸಿಗಲಿ. ಹೇಗೂ ಮಂಗಳೂರು ಚಲೋ ಮುಗಿದಿದೆ. ನವಕರ್ನಾಟಕದ ಚಿಂತನೆ ನಡೆಯಲಿ ಎಂದು ಹೇಳುತ್ತಾ ವಾರವನ್ನು ಮುಗಿಸುತ್ತಿದ್ದೇನೆ. ಮುಂದಿನ ವಾರ ಹೊಸ ವಿಚಾರ, ಹೊಸ ಕಲ್ಪನೆಗಳೊಂದಿಗೆ ಸಿಗೋಣ!

ಹನುಮಂತ ಕಾಮತ್, ಸಾಮಾಜಿಕ ಹೋರಾಟಗಾರ

0
Shares
  • Share On Facebook
  • Tweet It


hanumantha Kamathjenericmodi


Trending Now
ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
Hanumantha Kamath September 16, 2025
ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
Hanumantha Kamath September 16, 2025
You may also like
ಬ್ಯಾಂಕಿನವರನ್ನು ಇಲ್ಲಿ ತನಕ ತಲೆ ಮೇಲೆ ಹೊತ್ತುಕೊಂಡದ್ದೇ ತಪ್ಪು!
December 21, 2018
ಹಿಂದೆ ಕಾಂಗ್ರೆಸ್ ಮಾಡಿದ್ದ ತಪ್ಪುಗಳನ್ನು ಪರಿಹರಿಸಲು ಖಾದರ್ ಮನಸ್ಸು ಮಾಡ್ತಾರಾ?
August 9, 2018
ಉನ್ನತ ಶಿಕ್ಷಣದ ಉತ್ತೇಜನಕ್ಕೆ ಕೇಂದ್ರ ಸರ್ಕಾರದ ಭರ್ಜರಿ ಕೊಡುಗೆ, 1 ಲಕ್ಷ ಕೋಟಿ ಅನುದಾನ ಬಿಡುಗಡೆ
June 19, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
  • Popular Posts

    • 1
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 2
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 3
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 4
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 5
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search