• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ರಾಹುಲ್ ಗಾಂಧಿಯ ನಿತ್ಯ ಅಸಂಬದ್ಧ ಹೇಳಿಕೆಗಳಿಂದ ನಿಮ್ಮ ಪಕ್ಷದವರೇ “ಸೂ..ಮ… ಮತ್ತೆ ಬಾಯ್ಬಿಟ್ಟ” ಎನ್ನುತ್ತಿದ್ದಾರೆ!

Naresh Shenoy Posted On October 13, 2017
0


0
Shares
  • Share On Facebook
  • Tweet It

ಕರ್ನಾಟಕ ರಾಜ್ಯ ಸರಕಾರ ಸಚಿವ ರೋಶನ್ ಬೇಗ್ 500 ಮತ್ತು 1000 ರೂಪಾಯಿ ನೋಟ್ ಗಳು ಅಪಮೌಲ್ಯ ಗೊಂಡು ಒಂದು ವರ್ಷದ ನಂತರವೂ ಆ ಹೊಡೆತದಿಂದ ಹೊರಗೆ ಬಂದಿಲ್ಲ ಎನ್ನುವುದು ಸ್ಪಷ್ಟ. ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗೆ ತೆಗೆದಿಟ್ಟಿದ್ದ ಸಾವಿರಾರು ಕೋಟಿ ಐನೂರು ಮತ್ತು ಒಂದು ಸಾವಿರ ರೂಪಾಯಿ ನೋಟುಗಳು ಹಾಗೆ ಮಾಯಾವತಿ, ಅಖಿಲೇಶ್ ಸಿಂಗ್, ಕಾಂಗ್ರೆಸ್ ನಾಯಕರ ತಿಜೋರಿಯಲ್ಲಿ ಕೊಳೆತು ಹೋದ ಕಾರಣ ಜನರಿಗೆ ಪ್ರತಿ ಬಾರಿ ಹಣಕೊಟ್ಟು ಪುಸಲಾಯಿಸಿ ಗೆದ್ದು ಬರುತ್ತಿದ್ದ ಈ ಪಕ್ಷಗಳು ಈ ಪರಿ ಹೇಗೆ ಸೋತಿವೆ ಎನ್ನುವುದನ್ನು ಇಡೀ ರಾಷ್ಟ್ರ ನೋಡಿದೆ. ಇನ್ನು ನೋಟ್ ಅಪಮೌಲ್ಯದ ನಂತರ ಭಾರತದ ತೆರಿಗೆದಾರರ ಸಂಖ್ಯೆ ಹೆಚ್ಚಾಗಿರುವುದು ದೇಶದ ಆರ್ಥಿಕ ದೃಷ್ಟಿಕೋನದಿಂದ ಒಳ್ಳೆಯದು ಎನ್ನುವುದನ್ನು ಪಿಯುಸಿಯಲ್ಲಿ ಇಕಾನಾಮಿಕ್ಸ್ ಕಲಿತ ಯುವಕ ಕೂಡ ಹೇಳಬಲ್ಲ. ಇನ್ನೂ ದೇಶದ ಪರ್ಯಾಯ ಆರ್ಥಿಕ ವ್ಯವಸ್ಥೆಯಾಗಿದ್ದ ಕಳ್ಳನೋಟು, ನಕಲಿ ನೋಟು ಹಾವಳಿ ಹೇಗೆ ನಿಯಂತ್ರಣಕ್ಕೆ ಬಂತು ಎನ್ನುವುದನ್ನು ಅರ್ಥ ಶಾಸ್ತ್ರಜ್ಞರು ನೋಡಿದ್ದಾರೆ. ಅದರೊಂದಿಗೆ ಯಾವೆಲ್ಲ ಖಾತೆಗಳಲ್ಲಿ ಅಕ್ರಮ ಹಣ ಜಮೆಯಾಗಿದೆ ಮತ್ತು ಎಷ್ಟು ನಕಲಿ ಶೆಲ್ ಕಂಪೆನಿಗಳು ಇವೆ ಅದರಲ್ಲಿ ಎಷ್ಟು ಉದ್ದಿಮೆದಾರರು ಹಣ ಬಿಳಿ ಮಾಡುತ್ತಿದ್ದರು ಎಂದು ಕೂಡ ಕೇಂದ್ರ ಸರಕಾರ ಪಟ್ಟಿ ಹಿಡಿದು ಕುಳಿತಿದೆ. ಒಟ್ಟಿನಲ್ಲಿ ಕೆಲವು ದಿನ ಜನರಿಗೆ ಆದ ತೊಂದರೆ ರಾಷ್ಟ್ರದ ಹಿತದೃಷ್ಟಿಯಿಂದ ದೂರಗಾಮಿ ಪರಿಣಾಮಗಳನ್ನು ತೋರಿಸುವುದನ್ನು ದೇಶದ ಜನ ಗಮನಿಸುತ್ತಿದ್ದಾರೆ. ಇಷ್ಟು ವರ್ಷ ತೆರಿಗೆ ಕಳ್ಳರಿಗೆ ಅಭಯಹಸ್ತ ನೀಡುತ್ತಾ, ತನ್ನ ಹುಂಡಿಯನ್ನು ತುಂಬಿಸಿ ದೇಶ ಏನು ಬೇಕಾದರೂ ಆಗಲಿ ನಾವು ಚೆನ್ನಾಗಿದ್ದರೆ ಸಾಕು ಎನ್ನುವ ಧೋರಣೆಯನ್ನು ನಡೆಸಿಕೊಂಡು ಬರುತ್ತಿದ್ದ ಕಾಂಗ್ರೆಸ್ ಮಾತ್ರ ಆ ಶಾಕ್ ನಿಂದ ಹೊರಬಂದೇ ಇಲ್ಲ. ಆದರೆ ನರೇಂದ್ರ ಮೋದಿ ಪ್ರಧಾನಿಯಾದ ನಂತರ ತಾನು ತಿನ್ನಲ್ಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ ಎಂದು ಹೇಳಿದ ಬಳಿಕ ಅದನ್ನು ಒಂದೊಂದೇ ಹಂತಗಳಲ್ಲಿ ಪಾಲಿಸಿಕೊಂಡು ಬಂದಿದ್ದಾರೆ. ಅದಕ್ಕೆ ವಿರುದ್ಧವಾಗಿ ರಾಹುಲ್ ಗಾಂಧಿ ನಾಟಕ ಮಾಡಲು ಬ್ಯಾಕೊಂದರ ಹೊರಗೆ ಕ್ಯೂನಲ್ಲಿ ನಿಂತು ಮೂರ್ನಾಕು ಸಾವಿರ ತೆಗೆದುಕೊಂಡು ಹೋದದ್ದನ್ನು ಜನ ನೋಡಿದ್ದಾರೆ.
ಆದರೆ ಈಗ ಚುನಾವಣೆ ಹತ್ತಿರ ಬರುವಾಗ ಆವತ್ತು ರೂಪಾಯಿ ಅಪಮೌಲ್ಯದಿಂದ ತಮ್ಮ ತೀಜೊರಿಗೆ ಆದ ಹೊಡೆತವನ್ನು ಜೀರ್ಣಿಸಿಕೊಳ್ಳಲಾರದೆ ರೋಶನ್ ಬೇಗ್ ಅವರ ರೋಶ ಹೊರಗೆ ಬಂದಿದೆ. ರೂಪಾಯಿ ಅಪಮೌಲ್ಯದಿಂದ ಬಿಜೆಪಿಯವರೇ ಮೋದಿಯನ್ನು ಕೆಟ್ಟ ಅಸಹ್ಯ ಪದಗಳಿಂದ ಬಯ್ಯುತ್ತಿದ್ದಾರೆ ಎಂದಿದ್ದಾರೆ. ಆ ಶಬ್ದಗಳು ರೋಶನ್ ಬೇಗ್ ಘನತೆಗೆ ಮತ್ತು ವರ್ಚಸ್ಸಿಗೆ ಸಮಾನವಾಗಿರುವುದರಿಂದ ಇಲ್ಲಿ ಬರೆಯುವುದು ಕೂಡ ಪಾಪಕರ ಎನ್ನುವುದು ನಮ್ಮ ಅನಿಸಿಕೆ. ಮೊದಲನೇಯದಾಗಿ ಮೋದಿಯವರನ್ನು ಯಾವುದೇ ಕಾರಣಕ್ಕೂ ಬೈಯುವಂತಹ ಕೆಲಸ ಅವರು ಮಾಡಿಲ್ಲ. ಒಂದು ವೇಳೆ ಯಾರಾದರೂ ಬೈದರೆ ಆತ ಬಿಜೆಪಿ ಕಾರ್ಯಕರ್ಥನೊ ಅಥವಾ ಕಾಂಗ್ರೆಸ್ ಕರ್ಯಕರ್ಥನೋ ಎಂದು ರೋಶನ್ ಬೇಗ್ ಪರೀಕ್ಷಿಸುವುದು ಒಳ್ಳೆಯದು. ಯಾಕೆಂದರೆ ಆ ಅಕ್ಷರಗಳಲ್ಲಿ ಬೈಯುವುದು ನಿಮ್ಮ ಸಂಸ್ಕೃತಿ. ಒಂದು ವೇಳೆ ತೆರಿಗೆ ತಪ್ಪಿಸುತ್ತಾ ಮೋದಿಯವರಿಂದ ತೊಂದರೆಯಾಯಿತು ಎಂದು ಆ ಶಬ್ದಗಳಲ್ಲಿ ಬೈಯುವವ ಬಿಜೆಪಿಯಲ್ಲಿ ಇರುವುದಕ್ಕಿಂತ ಸೋನಿಯಾ ಗಾಂಧಿ ಪಾದ ನೆಕ್ಕಲಿ.
ಇನ್ನೊಂದು ರೋಶನ್ ಬೇಗ್ ಅವರೇ, ನಿಮ್ಮ ರಾಹುಲ್ ಗಾಂಧಿಯವರನ್ನು ಟೀಕಿಸುವುದು ತಪ್ಪು ಎನ್ನುತ್ತಿರಲ್ಲ, ಅವರು ಹೊಗಳುವುದು ಏನು ಮಾಡಿದ್ದಾರೆ ಎಂದು ನೀವೆ ಹೇಳಿ. ಅವರಿಗೆ ಹೊಗಳುವಂತದ್ದು ಏನಾದರೂ ಇದೆಯಾ ಎಂದು ಇಡೀ ರಾಷ್ಟ್ರದಲ್ಲಿ ದುರ್ಬೀನು ಹಿಡಿದುಕೊಂಡು ಹುಡುಕಿದರೂ ಏನಾದರೂ ಸಿಗುತ್ತದೆಯಾ? ಇದೇ ರಾಹುಲ್ ಗಾಂಧಿ ತಲೆಕೆಟ್ಟವರಂತೆ ಆಗಾಗ ಅಸಂಬದ್ಧ ಸ್ಟೇಟ್ ಮೆಂಟ್ ಕೊಡುವಾಗ ನಿಮ್ಮ ಪಕ್ಷದವರೇ ಸೂ……ಮ….. ಮತ್ತೆ ಬಾಯಿ ಬಿಟ್ಟನಲ್ಲಪ್ಪಾ ಎಂದು ಹೇಳಿದ್ದನ್ನು ಯಾರು ಬೇಕಾದರೂ ಯಾವಾಗ ಬೇಕಾದರೂ ಕೇಳಬಹುದು. ಒಂದು ವೇಳೆ ರೋಶನ್ ಬೇಗ್ ನಿಮಗೆ ಡೌಟಿದ್ದರೆ ನಾಳೆ, ನಾಡಿದ್ದರಲ್ಲಿ ಯಾವುದಾದರೂ ಪತ್ರಿಕೆ ತೆಗೆದು ನೋಡಿ, ನಿಮ್ಮ ರಾಹುಲ್ ಗಾಂಧಿ ಹೇಳಿಕೆ ಯಾವುದಾದರೂ ಇರುತ್ತೆ, ಆಗ ಗ್ಯಾರಂಟಿಯಾಗಿ ಹೇಳ್ತೆನೆ, ನಿಮ್ಮ ಬಾಯಿಯಿಂದ ಬರಲಿದೆ ” ಸೂ….ಮ….. ಮತ್ತೆ ಬಾಯ್ಬಿಟ್ಟ!”

0
Shares
  • Share On Facebook
  • Tweet It


rahul gandhiRoshan Beig


Trending Now
ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
Naresh Shenoy July 29, 2025
ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
Naresh Shenoy July 26, 2025
You may also like
ವಂದೇ ಮಾತರಂ ಸಂಪೂರ್ಣ ಕೇಳಿದರೆ ಏನು ಸಿಗುತ್ತೆ ಅಲ್ವಾ ರಾಹುಲ್ ಗಾಂಧಿ!
April 29, 2018
ದೇಶಭಕ್ತಿ ಸಾಬೀತಿಗೆ ಸಿನಿಮಾ ಮಂದಿರದಲ್ಲಿ ಎದ್ದು ನಿಲ್ಲುವುದು ಕಡ್ಡಾಯವಲ್ಲ : ಸುಪ್ರೀಂ
October 24, 2017
sept 14 – ಬುಲೆಟ್ ರೈಲು ಕನಸು ಸಾಕಾರಕ್ಕೆ ಮೋದಿ-ಅಬೆ ಶಂಕುಸ್ಥಾಪನೆ
September 12, 2017
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ
    • 6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..
    • ಶಿವದೂತ ಗುಳಿಗೆ ನಾಟಕದ "ಭೀಮರಾವ್" ರಮೇಶ್ ಕಲ್ಲಡ್ಕ ನಿಧನ!
    • ನೂರಾರು ಜನರಿಗೆ ಸಾಲಕೊಡಿಸುವ ನೆಪದಲ್ಲಿ ವಂಚನೆ: ರೋಶನ್ ಸಲ್ದಾನಾ ಪ್ರಕರಣ ಸಿಐಡಿಗೆ
    • ಕರ್ನಾಟಕದಲ್ಲಿ "ಮನೆಮನೆಗೆ ಪೊಲೀಸ್" ಏನು ಕಥೆ!
    • ಅಕ್ಟೋಬರ್ 2 ರಂದು ರಿಷಬ್ ಶೆಟ್ಟಿಯ ಕಾಂತಾರ ಅಧ್ಯಾಯ 1 ಬಿಡುಗಡೆ!
  • Popular Posts

    • 1
      ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • 2
      ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • 3
      SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • 4
      ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • 5
      ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ

  • Privacy Policy
  • Contact
© Tulunadu Infomedia.

Press enter/return to begin your search