• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ಗುಜರಾತಿ ಶಾಲೆಯ ಬಳಿ ದೋಣಿ ರೆಡಿ ಮಾಡಿಟ್ಟುಕೊಳ್ಳಿ!!

Hanumantha Kamath Posted On May 28, 2019
0


0
Shares
  • Share On Facebook
  • Tweet It

ಇನ್ನು ಹೆಚ್ಚೆಂದರೆ ಒಂದೆರಡು ದಿನ. ಕಳೆದ ವಾರಿ ಇದೇ ಸಮಯಕ್ಕೆ ಮೇ 30 ರಿಂದ ಜೂನ್ 2 ರ ನಡುವಿನ ಅವಧಿಯಲ್ಲಿ ಮಂಗಳೂರು ನಗರದ ಅನೇಕ ಮನೆಗಳಲ್ಲಿ ಇತಿಹಾಸದಲ್ಲಿ ಬರದಷ್ಟು ನೀರು ನುಗ್ಗಿತ್ತು. ಬೇಕಾದರೆ ಆವತ್ತಿನ ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಇದ್ರೆ ಹುಡುಕಿ. ಕೃತಕ ನೆರೆ ಹೇಗಿತ್ತು ಎಂದರೆ ಅಳಕೆಯ ಗುಜರಾತಿ ಶಾಲೆಯಿಂದ ಮಕ್ಕಳನ್ನು ಅಕ್ಷರಶ: ದೋಣಿಯಲ್ಲಿ ಕುಳ್ಳಿರಿಸಿ ಕರೆದುಕೊಂಡು ಹೋಗಿ ಮನೆಗೆ ಬಿಡಲಾಗಿತ್ತು. ಅದರಿಂದ ನಮ್ಮ ಮಂಗಳೂರು ಮಹಾನಗರ ಪಾಲಿಕೆಯ ಬುದ್ಧಿವಂತ ಇಂಜಿನಿಯರ್ಸ್ ಅಥವಾ ಅಧಿಕಾರಿಗಳು ಬುದ್ಧಿ ಕಲಿಯುತ್ತಾರೆ ಎಂದು ಅಂದುಕೊಂಡಿದ್ದೇವು. ಇಲ್ಲ, ಅವರಿಗೆ ಬುದ್ಧಿ ಬಂದಿಲ್ಲ. ಬುದ್ಧಿಯನ್ನು ಅವರು ಕಾಲೇಜು ಶಿಕ್ಷಣ ಮುಗಿಸಿ ಹೊರಗೆ ಬರುವಾಗಲೇ ಪ್ರಿನ್ಸಿಪಾಲರ ಕೈಯಲ್ಲಿ ಕೊಟ್ಟು ಬಂದಿದ್ದಾರೆ. ಮಕ್ಕಳು, ಪೋಷಕರು ಆವತ್ತು ಪಟ್ಟ ಕಷ್ಟದ ಬಗ್ಗೆ ಅರಿಯುವ ಹೃದಯವಾದರೂ ಇವರಿಗೆ ಇದೆಯಾ ಎಂದು ನೋಡಿದರೆ ಅದು ಕೂಡ ಇಲ್ಲ. ಅದನ್ನು ಅವರು ಬಂದರಿನಲ್ಲಿ ತೂಕಕ್ಕೆ ಮಾರಿಬಿಟ್ಟಿದ್ದಾರೆ. ಆದ್ದರಿಂದ ಈ ಬಾರಿಯೂ ಕಳೆದ ವರ್ಷದಷ್ಟೆ ಮಳೆ ಬಂದರೆ ಗುಜರಾತಿ ಶಾಲೆಯ ಮಕ್ಕಳು ಅನುಭವಿಸಲಿರುವ ಫೋಟೋ ತೆಗೆಯಲು ಪತ್ರಿಕೆಯವರು ಹೋಗಬೇಕೆಂದಿಲ್ಲ. ಹಿಂದಿನ ವರ್ಷದ್ದೇ ಹಾಕಿದರೂ ಸಾಕು. ಯಾಕೆಂದರೆ ಅದೇ ಪರಿಸ್ಥಿತಿ ಮತ್ತೆ ಬರಲಿದೆ.

ಒಂದೂವರೆ ಅಡಿ ಕೆಳಗೆ ಹೋಗಿ..

ನಾನು ಗುಜರಾತಿ ಶಾಲೆಯ ಉದಾಹರಣೆಯನ್ನು ಯಾಕೆ ಕೊಟ್ಟೆ ಎಂದು ನೀವು ಊಹಿಸಿರಬಹುದು. ಇದು ಈ ಬಾರಿಯೂ ಆಗಲಿರುವ ವಾಸ್ತವದ ಮುನ್ನುಡಿಯಷ್ಟೇ ನಾನು ಹೇಳುತ್ತಿರುವುದು. ಯಾಕೆಂದರೆ ಆ ಶಾಲೆಯ ಹಿಂದೆ ಒಂದು ರಾಜಕಾಲುವೆ ಇದೆ. ಕಳೆದ ಬಾರಿ ಅದು ಉಕ್ಕಿ ಹರಿದ ಪರಿಣಾಮವಾಗಿ ಕೃತಕ ನೆರೆ ಸೃಷ್ಟಿಯಾಗಿತ್ತು. ಈ ಬಾರಿ ಆ ರಾಜಕಾಲುವೆಯ ಹೂಳನ್ನು ಅರ್ಧಂಬದ್ಧ ತೆಗೆದಿದ್ದಾರೆ. ತೆಗೆದಿರುವ ಹೂಳು ಪ್ಲಸ್ ಮಣ್ಣನ್ನು ಅಲ್ಲಿಯೇ ಮೇಲೆ ಹಾಕಿದ್ದಾರೆ. ಇಲ್ಲಿ ಎರಡ್ಮೂರು ವಿಷಯಗಳು ಬರುತ್ತವೆ. ಒಂದನೇಯದಾಗಿ ಪೂರ್ಣ ಪ್ರಮಾಣದಲ್ಲಿ ಹೂಳನ್ನು ಯಾಕೆ ತೆಗೆದಿಲ್ಲ. ನಿಮಗೆ ಇಲ್ಲಿ ಇನ್ನೊಂದು ಸೂಕ್ಷ್ಮ ವಿಷಯವನ್ನು ಹೇಳುತ್ತೇನೆ. ಏನೆಂದರೆ ನಿಯಮಪ್ರಕಾರ ರಾಜಕಾಲುವೆಯ ಹೂಳು ತೆಗೆಯಲು ಇಳಿಯುವ ಜೆಸಿಬಿಗಳು ಕನಿಷ್ಟ ಒಂದೂವರೆ ಅಡಿಯಷ್ಟಾದರೂ ಹೂಳು ತೆಗೆಯಬೇಕು. ಆದರೆ ಪಾಲಿಕೆಯ ಅಧಿಕಾರಿಗಳು ಇದನ್ನು ಗಮನಿಸಿದ್ದಾರಾ? ಇಲ್ಲವೇ ಇಲ್ಲ. ಗುತ್ತಿಗೆದಾರರು ಅರ್ಧ ಫೀಟ್ ಹೂಳು ತೆಗೆದು ಮನೆಗೆ ಹೋಗಿ ಮಲಗಿ ಅಲ್ಲಿಂದಲೇ ಅಧಿಕಾರಿಗಳಿಗೆ ಪಾರ್ಸೆಲ್ ಕಳುಹಿಸಿದರೆ ಮುಗಿಯಿತು. ಯಾವ ಅಧಿಕಾರಿಯೂ ಎಷ್ಟು ಹೂಳು ಎತ್ತಲಾಗಿದೆ ಎಂದು ನೋಡಲ್ಲ.

ಟಿಪ್ಪರ್ ವ್ಯವಸ್ಥೆ ಯಾಕೆ ಮಾಡಲ್ಲ..

ಇನ್ನೊಂದು ಹೂಳನ್ನು ರಾಜಕಾಲುವೆಯ ಮೇಲೆ ಎತ್ತಿ ಹಾಕುತ್ತಾರಲ್ಲ. ಅದನ್ನು ಅಲ್ಲಿ ಚೆಂದಕ್ಕೆ ಇಡುವುದಲ್ಲ. ಹೂಳು ತೆಗೆದ ಬಳಿಕ ಅದನ್ನು ಅಲ್ಲಿಂದ ತೆಗೆದುಕೊಂಡು ಹೋಗುವ ಜವಾಬ್ದಾರಿ ಕೂಡ ಗುತ್ತಿಗೆದಾರರದ್ದು. ಆದಕ್ಕಾಗಿ ಆತ ಟಿಪ್ಪರ್ ವ್ಯವಸ್ಥೆ ಮಾಡಬೇಕು. ಆದರೆ ಗುತ್ತಿಗೆದಾರರು ಅದನ್ನು ನೂರಕ್ಕೆ ತೊಂಭತ್ತು ಸಾರಿ ತೆಗೆದುಕೊಂಡು ಹೋಗುವುದೇ ಇಲ್ಲ. ಇದರಿಂದ ಏನಾಗುತ್ತದೆ. ಮಳೆ ಬರುತ್ತಿದ್ದಂತೆ ಅದೇ ದಂಡೆಯ ಮೇಲಿರುವ ಹೂಳು ಮತ್ತೆ ಚರಂಡಿಯನ್ನು ಸೇರುತ್ತದೆ.
ಇದು ಕೇವಲ ಅಳಕೆಯ ಪರಿಸ್ಥಿತಿ ಅಲ್ಲ. ಕೊಟ್ಟಾರದಿಂದ ಹಿಡಿದು ಜೆಪ್ಪು, ಕಂದ್ರಿಕಂಬ್ಳ, ಬಳ್ಳಾಲ್ ಭಾಗ್, ಮಣ್ಣಗುಡ್ಡೆಯ ಭೋಜರಾವ್ ಲೇನ್ ಸಹಿತ ಅನೇಕ ಪ್ರದೇಶಗಳಲ್ಲಿ ಈ ಪರಿಸ್ಥಿತಿ ಬರುತ್ತದೆ. ಅಧಿಕಾರಿಗಳು ಚುನಾವಣೆಯ ನೀತಿ ಸಂಹಿತೆ ಎನ್ನುತ್ತಾರೆ. ರೂಟೀನ್ ಆಗಿ ನಡೆಯುವ ಕೆಲಸಗಳಿಗೆ ನೀತಿ ಸಂಹಿತೆ ಅಡ್ಡಿಬರುವುದಿಲ್ಲ. ಕೋಟಿಗಳ ಲೆಕ್ಕದಲ್ಲಿ ರಾಜಕಾಲುವೆ ಕ್ಲೀನ್ ಮಾಡಲು ಹಣ ಬಿಡುಗಡೆಯಾಗುತ್ತದೆ. ಅಧಿಕಾರಿಗಳು, ಗುತ್ತಿಗೆದಾರರು ಹೂಳು ತಿಂದು ತೇಗುತ್ತಾರೆ!

0
Shares
  • Share On Facebook
  • Tweet It




Trending Now
ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
Hanumantha Kamath September 11, 2025
ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
Hanumantha Kamath September 11, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
    • ಸೌಜನ್ಯ ಕೊಲೆ ಮಾಡಿದ್ದೇ ಮಾವ ವಿಠಲ ಗೌಡ - ಸ್ನೇಹಮಯಿ ಕೃಷ್ಣರಿಂದ ಎಸ್ಪಿಗೆ ದೂರು ಅರ್ಜಿ!
    • ಸೆಪ್ಟೆಂಬರ್ 9 ರಂದು ಮದ್ದೂರು ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಮುಖಂಡರ ಕರೆ!
  • Popular Posts

    • 1
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 2
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 3
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • 4
      ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • 5
      ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ

  • Privacy Policy
  • Contact
© Tulunadu Infomedia.

Press enter/return to begin your search