• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ನೀರಿನ ಬಾಕಿ ವಸೂಲಿ ಕೇವಲ ಘೋಷಣೆಯಾಗದೇ ಇರಲಿ ಮೇಯರ್!

TNN Correspondent Posted On August 17, 2017
0


0
Shares
  • Share On Facebook
  • Tweet It

ಪ್ರಾರಂಭದಲ್ಲಿಯೇ ಮೇಯರ್ ಕವಿತಾ ಸನಿಲ್ ಅವರನ್ನು ಅಭಿನಂದಿಸಿಯೇ ಮುಂದಿನದು ಬರೆಯುತ್ತೇನೆ. ಒಳ್ಳೆಯ ಕೆಲಸ ಮಾಡುವಾಗ ಅಭಿನಂದಿಸುವುದು ಕೂಡ ಅಗತ್ಯ. ಜನರು ಬಾಕಿ ಇಟ್ಟಿರುವ ನೀರಿನ ಬಿಲ್ ಸುಮಾರು 20 ಕೋಟಿಯಷ್ಟನ್ನು ವಸೂಲಿ ಮಾಡುತ್ತೇವೆ ಎಂದು ಮೆಯರ್ ಕವಿತಾ ಸನಿಲ್ ಅವರು ಘೋಷಿಸಿದ್ದಾರಲ್ಲ, ಆ ಕಾರಣಕ್ಕೆ ಅಭಿನಂದನೆ. ಆದರೆ ಒಂದು ನಿಜ, ಈ ಘೋಷಣೆ ಕೇವಲ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಮಾತ್ರ ಸೀಮಿತವಾಗುವುದಾದರೆ 15 ದಿನಗಳ ನಂತರ ವಾಸ್ತವ ನೋಡಿಕೊಂಡು ಅಭಿನಂದನೆಯನ್ನು ಹಿಂದಕ್ಕೆ ಪಡೆಯಬೇಕೋ ಅಥವಾ ಶಹಬ್ಬಾಷ್ ಎನ್ನಬೇಕೊ ಎಂದು ಮತ್ತೆ ನಿರ್ಧರಿಸಲಾಗುವುದು.

ಅಷ್ಟಕ್ಕೂ ಜನರು ಹತ್ತು ಸಾವಿರಕ್ಕಿಂತಲೂ ಹೆಚ್ಚು ಬಾಕಿ ಇಟ್ಟಿರುವ ನೀರಿನ ಬಿಲ್ 20 ಕೋಟಿಯನ್ನು ವಸೂಲು ಮಾಡಲು ನಾವು ಕ್ರಮ ಕೈಗೊಳ್ಳುತ್ತೆವೆ ಎಂದು ಹೇಳಿದ್ದು ಕವಿತಾ ಸನಿಲ್ ಅವರು ಪ್ರಥಮರೇನಲ್ಲ ಅಥವಾ ಪಾಲಿಕೆಯನ್ನು ಎರಡೂ ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಹತ್ತಿರದಿಂದ ನೋಡಿಕೊಂಡು ಬರುತ್ತಿರುವುದರಿಂದ ಅವರು ಕೊನೆಯವರೂ ಆಗುವ ಸಾಧ್ಯತೆ ಇಲ್ಲ. ಹೋದ ಬಾರಿ ಹರಿನಾಥ್ ಅವರು ಮೇಯರ್ ಆಗಿದ್ದಾಗಲೂ ಇದೇ ಮಾತನ್ನು ಹೇಳಿದ್ದರು. ಅವರ ಕಾಲದಲ್ಲಿ 11 ಕೋಟಿ ನೀರಿನ ಬಿಲ್ ಬಾಕಿ ಇತ್ತು. ಎಇಇ ನೇತೃತ್ವದಲ್ಲಿ ಐದು ಟೀಮ್ ಆಗಿತ್ತು. ದಿನಕ್ಕೆ ಇಷ್ಟು ಹಣ ವಸೂಲಿ ಮಾಡುವ ಗುರಿ ನಿಗದಿಪಡಿಸಲಾಗಿತ್ತು. ಮೊದಲ ತಿಂಗಳಲ್ಲಿ ಒಂದೂವರೆ ಕೋಟಿ, ಎರಡನೇಯ ತಿಂಗಳಲ್ಲಿ 50 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಮೂರನೇ ತಿಂಗಳಲ್ಲಿ ಕೇವಲ ಹತ್ತು ಲಕ್ಷ ವಸೂಲಿಯಾಗಿತ್ತು. ಅವರ ಮೊದಲು ಜೆಸಿಂತಾ ಮೇಯರ್ ಆಗಿದ್ದಾಗಲೂ ಇದೇ ಮಾತನ್ನು ಹೇಳಿದ್ದಾರೆ. ಮುಂದೆ ಯಾರಾದರೂ ಬೇರೆ ಮೇಯರ್ ಬಂದರೂ ಬಾಕಿ ಇರುವ ಇಂತಿಂಷ್ಟು ಕೋಟಿಯನ್ನು ವಸೂಲಿ ಮಾಡಿಯೇ ಮಾಡುತ್ತೇವೆ ಎಂದು ಘೋಷಣೆ ಮಾಡಿದರೆ ಅದರಲ್ಲಿ ಆಶ್ಚರ್ಯ ಪಡುವಂತದ್ದು ಏನೂ ಇಲ್ಲ. ಇದೊಂದು ಸಂಪ್ರದಾಯವಾಗಿ ಜಾರಿಯಲ್ಲಿದೆ ಎನ್ನುವುದು ಮಾತ್ರ ಬೇಸರದ ವಿಷಯ. ಬಹುಶ: ಕವಿತಾ ಸನಿಲ್ ಹೋಗುವ ಸ್ಪೀಡ್ ನೋಡಿದ್ರೆ ಇಪ್ಪತ್ತು ಕೋಟಿಯಲ್ಲಿ ಹತ್ತು ಕೋಟಿ ವಸೂಲಿ ಮಾಡಿದರೂ ಅದು ಒಂದಷ್ಟರ ಮಟ್ಟಿಗೆ ಸಾಧನೆ. ಇಲ್ಲದಿದ್ದರೆ ಏನಾಗುತ್ತೆ ಎಂದರೆ ಮೇಯರ್ ಅವರು ಘೋಷಣೆ ಮಾಡಿ ಹೋಗುತ್ತಾರೆ. ಘೋಷಣೆ ಆದ ಒಂದೆರಡು ತಿಂಗಳು ಈ ಅಧಿಕಾರಿಗಳು ಹೇಗೆ ಫೀಲ್ಡಿಗೆ ಹೊರಡುತ್ತಾರೆ ಎಂದರೆ ಬಾಕಿ ಇರುವವರ ಕಾಲರ್ ಪಟ್ಟಿ ಹಿಡಿದೇ ವಸೂಲಿ ಮಾಡುತ್ತಾರೋ ಎನ್ನುವ ಜೋಶ್ ಇರುತ್ತದೆ. ಇಪ್ಪತ್ತು ಕೋಟಿಯಲ್ಲಿ ಒಂದಿಷ್ಟು ಲಕ್ಷ ಸಂಗ್ರಹ ಆದ ಕೂಡಲೇ ಮೇಯರ್ ಸ್ಥಾನದಲ್ಲಿ ಇದ್ದವರು ಮತ್ತೊಮ್ಮೆ ಸುದ್ದಿಗೋಷ್ಟಿ ಮಾಡುತ್ತಾರೆ. ನಾವು ಒಂದು ಕೋಟಿ ಬಾಕಿಯನ್ನು ಒಂದು ತಿಂಗಳಲ್ಲಿ ಸಂಗ್ರಹ ಮಾಡಿದ್ದೇವೆ ಎಂದು ಘೋಷಿಸುತ್ತಾರೆ. ಅಕ್ಕಪಕ್ಕದಲ್ಲಿ ಕುಳಿತ ಉಪಮೇಯರ್, ಸಚೇತಕರು, ಹಿರಿಯ ಸದಸ್ಯರು ಪಾಲಿಕೆಗೆ ಚಿನ್ನದ ಬಾಗಿಲು ಬಂತೇನೋ ಎನಿಸುವ ಮಟ್ಟಿಗೆ ಫೋಸ್ ಕೊಡುತ್ತಾರೆ. ಒಂದು ತಿಂಗಳಿಗೆ ಒಂದೂವರೆ ಕೋಟಿ ಸಂಗ್ರಹ ಎಂದರೆ ತನ್ನ ಅಧಿಕಾರಾವಧಿಯ ಒಳಗೆ ಎಲ್ಲವೂ ವಸೂಲಿ ಆಗಿಯೇ ಆಗುತ್ತದೆ ಎಂದು ಒಂದು ಭ್ರಮೆಯನ್ನು ವರದಿಗಾರರ ಮನಸ್ಸಿನಲ್ಲಿ ಮೂಡಿಸಲಾಗುತ್ತದೆ. ಅದು ಮಾರನೇ ದಿನ ಹೈಲೈಟ್ ಆಗುತ್ತದೆ. ಬಾಕಿ ಇಟ್ಟಿರುವ ಶ್ರೀಮಂತರು ಒಳಗೊಳಗೆ ಮುಸಿಮುಸಿ ನಗುತ್ತಾರೆ.

ಆ ಕಥೆ ಏನು? ಯಾಕೆ ಇವರಿಗೆ ಎಲ್ಲಾ ಬಾಕಿಯನ್ನು ಸಂಗ್ರಹ ಮಾಡಲು ಆಗುವುದಿಲ್ಲ, ಅದು ಪ್ರತ್ಯೇಕ ಕಥೆ. ಕರೆಂಟ್ ಬಿಲ್ ಅನ್ನು ಕರೆಕ್ಟಾಗಿ ಕಟ್ಟುವ ಜನ ನೀರಿನ ಬಿಲ್ ಬಂದಾಗ ಯಾಕೆ ಸೋಮಾರಿ ಆಗುತ್ತಾರೆ. ಒಂದೊಂದು ಲಕ್ಷ ನೀರಿನ ಬಿಲ್ ಬಾಕಿ ಇಟ್ಟವರು, ಸಾವಿರಾರು ರೂಪಾಯಿ ಬಾಕಿ ಇಟ್ಟವರು ಯಾಕೆ ಆರಾಮವಾಗಿರುತ್ತಾರೆ. ಇದನ್ನೆಲ್ಲ ನಿಮಗೆ ಹೇಳುತ್ತೇನೆ. ನಾಳೆ ಸಿಗೋಣ

0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Tulunadu News July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Tulunadu News July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search