• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಮಲದ ಗುಂಡಿಗೆ ಇಳಿದಿಲ್ಲ, ಮರುನಿರ್ಮಾಣ ಕಾರ್ಯ ನಡೆಯುತ್ತಿತ್ತು!

Hanumantha Kamath Posted On October 20, 2017
0


0
Shares
  • Share On Facebook
  • Tweet It

ಮಂಗಳೂರಿನ ಬಂದರ್ ಪೊಲೀಸ್ ಠಾಣೆಯ ಸಮೀಪ ಮಲದ ಗುಂಡಿಗೆ ಮಂಗಳೂರು ಮಹಾನಗರ ಪಾಲಿಕೆಯ ಗುತ್ತಿಗೆದಾರರು ತಮ್ಮ ಕೆಲಸದವರನ್ನು ಇಳಿಸಿದರು ಎನ್ನುವುದು ದೊಡ್ಡ ಸುದ್ದಿಯಾಗಿದೆ. ಕೆಲವರು ಅದರ ಫೋಟೋ ತೆಗೆದು ಪತ್ರಿಕೆಯವರಿಗೆ ಕಳುಹಿಸಿ, ಸಾಮಾಜಿಕ ತಾಣಗಳಲ್ಲಿ ಪ್ರಚಾರ ಪಡಿಸಿ ಏನೋ ದೊಡ್ಡ ಆಗಬಾರದ ಅನಾಹುತ ಆಗಿ ಹೋಗಿದೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ನಿಜವಾದ ವಿಷಯ ಏನು? ಸುಪ್ರೀಂ ಕೋರ್ಟ್ ಹೇಳಿದ್ದು ಏನು? ಇದೆಲ್ಲವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಸುಪ್ರೀಂ ಕೋರ್ಟ್ ಹೇಳಿದ್ದನ್ನು ಅರ್ಧ ಕೇಳಿಸಿಕೊಂಡು ಪಾಲಿಕೆ ದೊಡ್ಡ ಅನಾಹುತ ಮಾಡಿತು ಎಂದು ಹೇಳಿದರೆ ಅದು ಮತ್ತೊಂದು ವಿವಾದಕ್ಕೆ ಕಾರಣವಾದೀತು.


ಸುಪ್ರೀಂ ಕೋರ್ಟ್ ಏನು ಹೇಳಿತ್ತು ಎಂದರೆ ಮಲದ ಗುಂಡಿ ತುಂಬಿ ತುಳುಕುವಾಗ ಅದರಲ್ಲಿ ಕಾರ್ಮಿಕರನ್ನು ಇಳಿಸುವುದು ತಪ್ಪು. ಏಕೆಂದರೆ ಕುತ್ತಿಗೆ ಮಟ್ಟದ ತನಕ ಮಲ ತುಂಬಿರುವಾಗ ಕೆಲವೊಮ್ಮೆ ಅದರ ಒಳಗೆ ಕೂಡ ಹೋಗಿ ಸ್ವಚ್ಚ ಮಾಡಿದರೆ ಆಗ ಇಳಿದ ಕಾರ್ಮಿಕನ ದೇಹದ ಮೇಲೆ ಅದು ಪ್ರತಿಕೂಲ ಪರಿಣಾಮ ಬೀರಬಹುದು. ಹಲವು ಬಾರಿ ಮಲಗುಂಡಿಯ ಕೆಟ್ಟ ಗಾಳಿ ಅಥವಾ ವಿಷವಾಯುವಿನ ಪರಿಣಾಮವಾಗಿ ಪೌರ ಕಾರ್ಮಿಕರು ಸಾವನ್ನು ಕೂಡ ಅಪ್ಪಬಹುದು. ಆದ್ದರಿಂದ ಅಮಾನವೀಯ ಪದ್ಧತಿಯನ್ನು ನಿಲ್ಲಿಸಿ ಯಂತ್ರದ ಮೂಲಕ ಮಲಗುಂಡಿಯನ್ನು ಸ್ವಚ್ಚ ಮಾಡಿಸಬೇಕು ಎಂದು ಹೇಳಿತ್ತು. ಆದರೆ ಮೊನ್ನೆ ಬಂದರಿನಲ್ಲಿ ನಡೆದದ್ದೇ ಬೇರೆ. ಬೇಕಾದರೆ ನೀವು ಆ ಫೋಟೋಗಳನ್ನು ಸರಿಯಾಗಿ ಗಮನಿಸಿ. ಅಲ್ಲಿ ಕಾರ್ಮಿಕರು ಮಲದ ಗುಂಡಿಯಲ್ಲಿ ಇಳಿದದ್ದಲ್ಲ. ಅದು ಮಲದ ಗುಂಡಿಯ ಮರು ನಿರ್ಮಾಣ ಕಾರ್ಯ. ಈ ಮ್ಯಾನ್ ಹೋಲ್ ಇರುತ್ತದೆಯಲ್ಲ. ಅದರ ಒಳಗೆ ಸಿಮೆಂಟಿನ ಕೋಟಿಂಗ್ ಇರುತ್ತದೆ. ಅದು ಕಾಲಕ್ರಮೇಣ ಅಲ್ಲಿ ಒಳಗೆ ವಿಷವಾಯುವಿನ ಪರಿಣಾಮ ಕರಗುತ್ತಾ ಹೋಗುತ್ತದೆ. ಸಿಮೆಂಟ್ ಕೋಟಿಂಗ್ ಕರಗಿದ ಪರಿಣಾಮ ಅಲ್ಲಿ ಮಲ ಅಥವಾ ಮನುಷ್ಯನ ತ್ಯಾಜ್ಯ ಮ್ಯಾನ್ ಹೋಲ್ ನಿಂದ ಲೀಕೇಜ್ ಆಗಲು ಶುರುವಾಗುತ್ತದೆ. ಒಮ್ಮೆ ಲೀಕ್ ಆಗಲು ಶುರುವಾದರೆ ಅದು ಹೊರಗೆ ಬಂದು ಪರಿಸರ ಗಲೀಜಾಗುತ್ತದೆ. ಆಗ ಏನು ಮಾಡಬೇಕು ಎಂದರೆ ಮ್ಯಾನ್ ಹೋಲ್ ಒಳಭಾಗದಲ್ಲಿ ಸಿಮೆಂಟಿನ ಪ್ಲಾಸ್ಟರಿಂಗ್ ಮಾಡಲೇಬೇಕು. ಅದು ಅನಿವಾರ್ಯ. ಅದನ್ನು ಮಹಾನಗರ ಪಾಲಿಕೆ ಗುತ್ತಿಗೆದಾರರಿಗೆ ಕೆಲಸ ಕೊಟ್ಟಿತ್ತು. ಇದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಮ್ಯಾನ್ ಹೋಲ್ ಮರು ನಿರ್ಮಾಣ ಮಾಡುವಾಗ ಕೆಲಸದವರು ಕೆಳಗೆ ಇಳಿಯದೇ ಹೋದರೆ ಅಲ್ಲಿ ಕಲ್ಲು, ಸಿಮೆಂಟ್ ಹಾಕಿ ಕಟ್ಟುವುದು ಹೇಗೆ? ಅದನ್ನು ಯಂತ್ರ ಮಾಡುತ್ತದೆಯಾ? ಇನ್ನು ಆ ಕಾರ್ಮಿಕರೇನೂ ತ್ಯಾಜ್ಯದ ಗುಂಡಿಯ ಒಳಗೆ ಇಳಿದಿರಲಿಲ್ಲ. ಸರಿಯಾಗಿ ನೋಡಿದರೆ ಅವರು ಮ್ಯಾನ್ ಹೋಲ್ ಒಳಗೆ ಇಳಿದದ್ದೇ ಅಲ್ಲ. ಅಲ್ಲಿರುವ ಮ್ಯಾನ್ ಹೋಲ್ ಹಿಂದೆನೆ demolish ಆಗಿದೆ.


ಈಗ ಉಳಿದಿರುವ ಪ್ರಶ್ನೆ: ಸುಪ್ರೀಂ ಕೋರ್ಟ್ ಕೊಟ್ಟಿರುವ ಆದೇಶವನ್ನು ಬೇರೆ ಬೇರೆ ರಾಜ್ಯಗಳ ಸರಕಾರಗಳು ಮೇಲ್ಮನವಿ ಅರ್ಜಿ ಹಾಕಿ ವಿನಂತಿಸಬಹುದು. ಹೇಗೆಂದರೆ ತುಂಬಿ ತುಳುಕುತ್ತಿರುವ ಮ್ಯಾನ್ ಹೋಲ್ ಕ್ಲೀನ್ ಮಾಡಲು ಮನುಷ್ಯರನ್ನು ಇಳಿಸಬಾರದು ಸರಿ, ಒಪ್ಪೋಣ. ಆದರೆ ನಿರ್ಮಾಣ, ಮರು ನಿರ್ಮಾಣ, ರಿಪೇರಿ ಮಾಡಬೇಕಾದ ಪರಿಸ್ಥಿತಿ ಬಂದಾಗ ಅಥವಾ ನಿರ್ವಹಣೆಯ ವಿಷಯ ಬಂದಾಗ ಏನು ಮಾಡುವುದು ಎಂದು ಕೇಳಬೇಕು. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಕೊಟ್ಟಿರುವ ಆದೇಶ ಆವತ್ತಿನಿಂದಲೇ ಗೊಂದಲಕ್ಕೆ ಕಾರಣವಾಗಿದೆ. ಆದ್ದರಿಂದ ರಾಜ್ಯ ಸರಕಾರಗಳು ರಾಜ್ಯದ ಹೈಕೋರ್ಟಿಗೆ ಅಫಿದಾವಿತ್ ಸಲ್ಲಿಸಿ, ಸುಪ್ರೀಂ ಕೋರ್ಟ್ ಕೊಟ್ಟಿರುವ ಸೂಚನೆಯಲ್ಲಿ ಸ್ಪಷ್ಟತೆಯ ಕೊರತೆ ಇದೆ. ಮ್ಯಾನ್ ಹೋಲ್ ಗೆ ಕಾರ್ಮಿಕರನ್ನು ಇಳಿಸುವುದು ಬೇರೆ. ಹಾಗೆ ಮ್ಯಾನ್ ಹೋಲ್ ಮರು ನಿರ್ಮಾಣ ಬೇರೆ. ಒಂದು ವೇಳೆ ಮ್ಯಾನ್ ಹೋಲ್ ಮರು ನಿರ್ಮಾಣವಾಗುವಾಗ ಕಾರ್ಮಿಕರ ರಕ್ಷಣೆ ಮತ್ತು ಆರೋಗ್ಯದ ಬಗ್ಗೆ ಏನಾದರೂ ಹೆಚ್ಚು ಕಡಿಮೆ ಆದರೆ ಆಗ ಅದರ ಜವಾಬ್ದಾರಿ ನಮ್ಮದು. ಅದು ಬಿಟ್ಟು ಹೀಗೆ ರಿಪೇರಿ ಮಾಡಬೇಕಾದ ಸಂದರ್ಭದಲ್ಲಿ ಕಾರ್ಮಿಕರನ್ನು ಬಳಸದೇ ಬೇರೆ ವಿಧಿಯಿಲ್ಲ ಎಂದು ಮನವರಿಕೆ ಮಾಡಿಕೊಡಬೇಕು.

ಮೊನ್ನೆಯ ಬಂದರಿನ ಮ್ಯಾನ್ ಹೋಲ್ ಅದೊಂದು ಮರು ನಿರ್ಮಾಣ ಕಾರ್ಯ. ಅದರ ಬಗ್ಗೆ ವಿವಿಧ ಜನರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ಕೊಡುತ್ತಿದ್ದಾರೆ. ಆದರೆ ಸತ್ಯ ವಿಷಯವನ್ನು ಇಲ್ಲಿ ಹೇಳಲಾಗಿದೆ. ಸುಪ್ರೀಂ ಕೋರ್ಟ್ ಕೊಟ್ಟ ಸೂಚನೆಯಿಂದ ಮ್ಯಾನ್ ಹೋಲ್ ನಿರ್ಮಾಣಕ್ಕೆ ದಕ್ಕೆ ಬರುತ್ತದೆ ಮತ್ತು ಅದೊಂದು ವಿವಾದಕ್ಕೆ ಕಾರಣವಾಗುತ್ತದೆ ಎಂದಾದರೆ ಆ ತೀರ್ಪನ್ನು ಮರು ಪರಿಶೀಲಿಸಲು ನ್ಯಾಯಾಲಯಕ್ಕೆ ಸರಕಾರಗಳು ಅರ್ಜಿ ಸಲ್ಲಿಸಬೇಕು. ಇನ್ನು ಮ್ಯಾನ್ ಹೋಲ್ ಕಟ್ಟುವಾಗ ಇಳಿದ ಕಾರ್ಮಿಕರಿಗೆ ಸರಿಯಾದ ಭದ್ರತೆ ಇಲ್ಲ ಎಂದಾದಲ್ಲಿ ಅದು ಗುತ್ತಿಗೆದಾರನ ಬೇಜವಾಬ್ದಾರಿ. ಒಟ್ಟಿನಲ್ಲಿ ವಾಸ್ತವ ಮತ್ತು ತೀರ್ಪಿನ ನಡುವೆ ಆದ ವಿವಾದ ಸಾಮಾಜಿಕ ತಾಣಗಳಲ್ಲಿ ಸುದ್ದಿಯಾಗಿ ಪತ್ರಿಕೆಗಳಲ್ಲಿ ದೊಡ್ಡ ವರದಿಯಾಗಿ ಮೂಡಿಬಂದಿರುವುದು ಪ್ರಜ್ಞಾವಂತ ನಗರದ ಜನರಿಗೆ ಗೊಂದಲಕ್ಕೆ ಕಾರಣವಾಗಿತ್ತು!

0
Shares
  • Share On Facebook
  • Tweet It


Man holemangaluru


Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Hanumantha Kamath September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Hanumantha Kamath September 17, 2025
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಹಿಂದೆ ಕಾಂಗ್ರೆಸ್ ಮಾಡಿದ್ದ ತಪ್ಪುಗಳನ್ನು ಪರಿಹರಿಸಲು ಖಾದರ್ ಮನಸ್ಸು ಮಾಡ್ತಾರಾ?
August 9, 2018
ಮಂಗಳೂರು ಈ ಪರಿ ನೆರೆ ಕಾಣಲು ಇರುವ ಕಾರಣಗಳೇನು!!
May 30, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search