• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ನೀರು ಹಾಕಲು ಗತಿ ಇಲ್ಲದಿದ್ದರೆ ಹಂಪನಕಟ್ಟೆಯಲ್ಲಿ ನೆಡುವುದು ಯಾಕೆ?

Hanumantha Kamath Posted On October 1, 2021
0


0
Shares
  • Share On Facebook
  • Tweet It

ಅಭಿವೃದ್ಧಿ ಎಂದರೆ ಎರಡು ರೀತಿಯಲ್ಲಿ ಇರುತ್ತದೆ. ಒಂದು ಏನೂ ಇಲ್ಲದ ಪಾಳುಭೂಮಿಯಲ್ಲಿ ಏನಾದರೂ ನಿರ್ಮಾಣ ಮಾಡುವುದು ಮತ್ತು ಎರಡನೇಯದು ನಿರ್ಮಾಣ ಮಾಡಿದ್ದನ್ನು ಉಳಿಸಿ ಬೆಳೆಸುವುದು. ಬೇಕಾದರೆ ನೋಡಿ, ಎಷ್ಟೋ ಸರಕಾರಿ ಕಟ್ಟಡಗಳು ಅನುದಾನ ಇದೆ ಎನ್ನುವ ಕಾರಣಕ್ಕೆ ನಿರ್ಮಾಣವಾಗುತ್ತದೆ. ನಂತರ ಅದನ್ನು ಬಳಕೆಗೆ ಲೋಕಾರ್ಪಣೆ ಮಾಡದೇ ಹಾಗೆ ಬಿಟ್ಟ ಕಾರಣ ಅದು ಪಾಳು ಬಿದ್ದ ಕೊಂಪೆಯಾಗುತ್ತದೆ. ಹಣ ಯಾರದ್ದು ವೇಸ್ಟ್ ಆಯಿತು ಎಂದು ನಾನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇವತ್ತು ನಾನೇನು ದೊಡ್ಡ ಕಟ್ಟಡಗಳ ವಿಷಯ ತೆಗೆಯಲು ಹೋಗುವುದೇ ಇಲ್ಲ. ನಾನು ಇವತ್ತು ನಿಮಗೆ ಹೇಳುತ್ತಿರುವುದು ಬಹಳ ಸಣ್ಣ ವಿಷಯ ಅನಿಸಬಹುದು. ಆದರೆ ಯಾವ ರೀತಿಯಲ್ಲಿ ನಿರ್ವಹಣೆ ಎನ್ನುವುದನ್ನು ಮಾಡದೇ ಹೋದರೆ ಅದು ಹೇಗೆ ಕರಟಿ ಹೋಗುತ್ತದೆ ಎನ್ನುವುದು ಈ ಜಾಗೃತ ಅಂಕಣದ ವಿಷಯ.
ಮಂಗಳೂರಿನ ಹೃದಯಭಾಗವಾದ ಹಂಪನಕಟ್ಟೆಯನ್ನು ಒಂದಿಷ್ಟು ಚೆಂದ ಮಾಡಬೇಕು ಎನ್ನುವ ಕಾರಣಕ್ಕೆ ಹೇಗೂ ಅನುದಾನ ಇದೆಯಲ್ಲ ಎಂದು ಸ್ಮಾರ್ಟ್ ಸಿಟಿಯವರು ಕೆಲವು ಸಸಿಗಳನ್ನು ನೆಟ್ಟು ಬಿಟ್ಟರು. ಅದು ಡಿವೈಡರ್ ಇರಬಹುದು, ಹಂಪನಕಟ್ಟೆಯ ಬಾವಿಯ ಆಸುಪಾಸಿನ ಜಾಗ ಇರಬಹುದು. ಎಲ್ಲಾ ಕಡೆ ಸಸಿಗಳ ನೆಡುವಿಕೆ ಆಯಿತು. ಇದನ್ನು ನೋಡಿದವರಿಗೆ ಮಂಗಳೂರು ಹೃದಯಭಾಗ ಇಷ್ಟು ಆಕರ್ಷಣೀಯವಾಗಿದೆಯಲ್ಲ ಎಂದು ಅನಿಸುತ್ತಿತ್ತು. ಹೊರಗಿನಿಂದ ಮಂಗಳೂರಿಗೆ ಬರುವವರಿಗೆ ಒಂದು ಕ್ಷಣ ಸೋಜಿಗವೂ ಆಗುವಂತಾಯಿತು. ನಮಗೂ ಕೂಡ ಇಲ್ಲಿನ ನಿವಾಸಿಗಳಿಗೆ ಬಹಳ ಹೆಮ್ಮೆಯ ರೀತಿಯಲ್ಲಿ ಆ ಪ್ರದೇಶ ಕಂಡುಬರುತ್ತಿತ್ತು. ನಮ್ಮ ಖುಷಿ, ಹೆಮ್ಮೆ ಮತ್ತು ಬೇರೆ ಊರಿನವರ ಆಶ್ಚರ್ಯ ಕೆಲವೇ ದಿನಗಳಲ್ಲಿ ಮಧ್ಯಾಹ್ನದ ಸೂರ್ಯನ ಬಿಸಿಲಿಗೆ ಕಪ್ಪಾಗಿ ಹೋಗುತ್ತದೆ ಎಂದು ಯಾರಿಗೆ ಗೊತ್ತು. ಇದು ಅಕ್ಷರಶ: ಸತ್ಯ. ಎರಡ್ಮೂರು ದಿನಗಳಿಂದ ಮಂಗಳೂರು ನಗರದಲ್ಲಿ ಹನಿ ನೀರು ಆಗಸದಿಂದ ಕೆಳಗೆ ಬೀಳಲು ಸಿದ್ಧವಿಲ್ಲ. ಅದರ ನಡುವೆ ಸೂರ್ಯ ಸಿಕ್ಕಿದ್ದೇ ಚಾನ್ಸ್ ಅಂತ ಲೆಕ್ಕಕ್ಕಿಂತ ಹೆಚ್ಚು ಹೊಳೆಯುತ್ತಿದ್ದಾನೆ. ಅವನ ಕೆಳಗೆ ಮಂಗಳೂರಿನ ಹೃದಯಭಾಗದ ಸ್ಮಾರ್ಟ್ ಸಿಟಿ ಸಸಿಗಳು ಜೀವ ಬಿಡಲು ತಯಾರಾಗಿ ಹೋಗಿವೆ. ಯಾಕೆಂದರೆ ಅವುಗಳಿಗೆ ಇಲ್ಲಿಯ ತನಕ ವರುಣ ದೇವ ನೀರು ಹಾಕುತ್ತಿದ್ದ. ಅವನ ಅನುಪಸ್ಥಿತಿಯಲ್ಲಿ ಯಾರು ಹಾಕುವುದು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಸ್ಮಾರ್ಟ್ ಸಿಟಿಯವರು ತಮ್ಮ ಕೆಲಸ ಮುಗಿಸಿ ಕೈ ತೊಳೆದುಕೊಂಡು ಹೋಗಿ ಆಗಿದೆ. ಮಂಗಳೂರು ಮಹಾನಗರ ಪಾಲಿಕೆಯವರಿಗೆ ಗಿಡಗಳಿಗೆ ನೀರು ಹಾಕುವ ಉಮ್ಮೇದು ಇಲ್ಲ. ಹಾಗಿರುವಾಗ ಜೀವ ಬಿಡದೆ ಆ ಗಿಡಗಳು ಏನು ತಾನೆ ಮಾಡಿಯಾವು. ನಾನು ಹೇಳುವುದು, ಇಲ್ಲಿ ಯಾರ ಕೆಲಸ ಎಂದು ಯಾಕೆ ಕರೆಕ್ಟಾಗಿ ಒಂದು ನಿರ್ಣಯಕ್ಕೆ ಬಂದು ಇದಮಿತ್ಥಂ ಮಾಡಲು ಸಾಧ್ಯವಿಲ್ಲವೇ? ಒಂದು ವೇಳೆ ಆಗದಿದ್ದರೆ ಕನಿಷ್ಟ ಪಾಲಿಕೆ-ಸ್ಮಾರ್ಟ್ ಸಿಟಿಯವರು ಒಂದು ನಿರ್ಧಾರಕ್ಕೆ ಬರುವ ತನಕ ಮನಪಾ ಸದಸ್ಯರು ಈ ಕೆಲಸ ಮಾಡಿದ್ದರೆ ಕನಿಷ್ಟ ಆ ಸಸಿಗಳು ಥ್ಯಾಂಕ್ಸ್ ಹೇಳುತ್ತಿದ್ದವು. ಅದು ಯಾರ ವಾರ್ಡಿಗೆ ಬರುತ್ತದೆಯೋ ಅವರಾದರೂ ಮನಸ್ಸಿಟ್ಟು ಆ ವಾರ್ಡಿನಿಂದ ಗೆದ್ದದ್ದಕಾದರೂ ಮಾಡಬಹುದಲ್ಲ. ಅಂತಹ ವಾರ್ಡಿನಲ್ಲಿ ಗೆಲ್ಲುವುದು ಕೂಡ ಒಂದು ಹೆಮ್ಮೆಯ ವಿಷಯ. ಯಾಕೆಂದರೆ ಆ ಭಾಗದಲ್ಲಿ ಅನೇಕ ಸರಕಾರಿ ಕಟ್ಟಡ ಮತ್ತು ಆಡಳಿತಾತ್ಮಕ ಕೆಲಸಗಳು ನಡೆಯುವಂತಹ ಜಾಗ ಅದು. ಅಲ್ಲಿ ಯಾವುದೇ ಸರಕಾರಿ ಉದ್ಘಾಟನೆ ಆಗಲಿ, ಕಾರ್ಯಕ್ರಮ ಆಗಲಿ, ಆ ಭಾಗದ ಮನಪಾ ಸದಸ್ಯರಿಗೆ ವಿಶೇಷವಾಗಿ ವೇದಿಕೆಯಲ್ಲಿ ಆಹ್ವಾನ ಇರುತ್ತದೆ. ಅದನ್ನು ಹೆಮ್ಮೆಯಿಂದ ಬಳಸುವ ಅವರು ಈ ಗಿಡಗಳು ಮಾತನಾಡುವುದಿಲ್ಲ ಎನ್ನುವ ಒಂದೇ ಕಾರಣಕ್ಕೆ ನೀರು ಹಾಕುವುದು ದೇವರಿಗೆ ಬಿಟ್ಟರೆ ಪಾಪ ಬರುವುದಿಲ್ಲವೇ?
ಇನ್ನು ಸ್ಮಾರ್ಟ್ ಸಿಟಿಯವರು ಕೂಡ ತಮಗೆ ರಸ್ತೆ ಮಾತ್ರ ಅಭಿವೃದ್ಧಿ ಅಲ್ಲ ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅವರಿಗೆ ನೀರು ಪೂರೈಕೆ ವ್ಯವಸ್ಥೆ, ವಿದ್ಯಾಕ್ಷೇತ್ರಗಳಿಗೆ ಅಭಿವೃದ್ಧಿ ಸಹಾಯ, ಪರಿಸರ ಸಹ್ಯವಾಗಿ ಕಾಣಲು ಹಸಿರು ವಲಯ ಸಹಿತ ಬೇರೆ ಕೆಲವು ಯೋಜನೆಗಳನ್ನು ಮಾಡಲು ಇದೆ. ಆದರೆ ಇವರಿಗೆ ರಸ್ತೆ ಮೊದಲ ಪ್ರಾಶಸ್ತ್ಯ. ಹಾಗಂತ ಏನೋ ಬೇಕಾಬಿಟ್ಟಿ ಮಾಡಿ ಇಂತಹ ಉತ್ತಮ ಕಾರ್ಯಗಳನ್ನು ಅರ್ಧದಲ್ಲಿ ಕೈಬಿಡಬಾರದು. ಸ್ಮಾರ್ಟ್ ಸಿಟಿಯವರಿಗೆ ಸರಕಾರಿ ಶಾಲಾ, ಕಾಲೇಜುಗಳಲ್ಲಿ ಕೂಡ ಏನಾದರೂ ಸ್ಮಾರ್ಟ್ ಕೆಲಸ ಮಾಡಬೇಕು ಎನ್ನುವ ನಿರ್ದೇಶನ ಇದೆ. ಅದಕ್ಕಾಗಿ ಅವರು ಈ ಒಪನ್ ಸ್ಟೇಜ್ ಇರುವ ಶಾಲಾ-ಕಾಲೇಜುಗಳಲ್ಲಿ ಅದಕ್ಕೆ ಸುಣ್ಣ, ಬಣ್ಣ ಬಳಿದು ನಾಲ್ಕು ಕಾಂಕ್ರೀಟ್ ತರಹದ್ದು ಎದುರಿಗೆ ಹಾಕಿ ಮುಗಿಸುತ್ತಾರೆ. ಕೆಲವು ಕಡೆ ನಾಲ್ಕು ಮಕ್ಕಳು ಇದ್ದರೂ ಆ ಶಾಲೆಗಳಿಗೆ ಏನೋ ಮಾಡಲು ಹೋಗಿ ಅವು ಬಳಕೆ ಆಗದೇ ಉಳಿದುಬಿಡುವಂತದ್ದು ಇದೆ. ಆದ್ದರಿಂದ ಈಗ ಅರ್ಜೇಂಟಾಗಿ ಇವತ್ತು ನಾನು ಪೋಸ್ಟ್ ಮಾಡಿದ ಫೋಟೋಗಳಲ್ಲಿರುವ ಸಸಿಗಳಿಗೆ ನೀರು ಹಾಕುವುದು ಯಾರು ಎಂದು ನಿರ್ಧಾರಕ್ಕೆ ಪಾಲಿಕೆ ಅಥವಾ ಸ್ಮಾರ್ಟ್ ಸಿಟಿಯವರು ಬರುವುದು ಒಳ್ಳೆಯದು. ಇಲ್ಲದೇ ಹೋದರೆ ಹೀಗೆ ಒಂದು ಕಡೆ ಮಾಡುವುದು, ಮತ್ತೊಂದೆಡೆ ಅದನ್ನು ದೇವರು ನೋಡಿಕೊಳ್ಳಲಿ ಎಂದು ಬಿಟ್ಟರೆ ಆ ಸಸಿಗಳ ಶಾಪ ನಿಮಗೆ ಗ್ಯಾರಂಟಿ!
0
Shares
  • Share On Facebook
  • Tweet It




Trending Now
ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
Hanumantha Kamath July 8, 2025
ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
Hanumantha Kamath July 8, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
  • Popular Posts

    • 1
      ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • 2
      ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • 3
      ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • 4
      ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • 5
      ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!

  • Privacy Policy
  • Contact
© Tulunadu Infomedia.

Press enter/return to begin your search